1-5ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣ ರದ್ದು..!

ಬೆಂಗಳೂರು

     ಒಂದರಿಂದ ಏಳನೇ ತರಗತಿಯವರೆಗೆ ಆನ್ಲೈನ್ ತರಗತಿಗಳನ್ನು ನಡೆಸಬಾರದು ಎಂಬ ರಾಜ್ಯ ಸಚಿವ ಸಂಪುಟದ ಒತ್ತಡಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಣಿದಿಲ್ಲ.

    ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 1 ರಿದ 5ರ ಬದಲಿಗೆ 7 ನೇ ತರಗತಿವರೆಗೆ ಆನ್ ಲೈನ್ ಪರೀಕ್ಷೆ ನಡೆಸದಂತೆ ಸಚಿವ ಸಂಪುಟದ ಬಹುತೆಕ ಸದಸ್ಯರು ಮಾಡಿದ ಒತ್ತಡಕ್ಕೆ ಸುರೇಶ್ ಕುಮಾರ್ ಮಣಿಯಲಿಲ್ಲ. 1 ರಿಂದ 5 ನೇ ತರಗತಿ ವರೆಗೆ ಮಾತ್ರ ಆನ್ ಲೈನ್ ಶಿಕ್ಷಣ ರದ್ದುಪಡಿಸಲು ತಮ್ಮ ಸಮ್ಮತಿ ಇದೆ. ಇದನ್ನು 7ನೇ ತರಗತಿವರೆಗೆ ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಆದರೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ, ಸಚಿವ ಸಂಪುಟ ಸಭೆಯ ನಂತರ 7 ನೇ ತರಗತಿವರೆಗೆ ಆನ್ ಲೈನ್ ತರಗತಿಗಳನ್ನು ರದ್ದುಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಘೋಷಿಸಿದರು.

     ಇದಕ್ಕೆ ತಕ್ಷಣವೇ ಟ್ವೀಟ್ ಮೂಲಕ ಸುರೇಶ್ ಕುಮಾರ್, 5 ನೇ ತರಗತಿವರೆಗೆ ಮಾತ್ರ ಆನ್ ಲೈನ್ ತರಗತಿ ರದ್ದಾಗಲಿದೆ ಎಂದು ಸ್ಪಷ್ಟೀಕರ ನೀಡಿದರು. 7ನೇ ಗರಗತಿ ವರೆಗೆ ಆನ್ ಲೈನ್ ತರಗತಿಗಳನ್ನು ರದ್ದು ಮಾಡುವ ಕುರಿತಂತೆ ಯಾವುದೇ ತೀರ್ಮಾನ ತೆಗದುಕೊಂಡಿಲ್ಲ. ಈ ಕುರಿತು ಕೇವಲ ಚೆರ್ಚೆ ನಡೆಸಲಾಗಿದೆ ಹೊರತು. ಸಚಿವ ಸಂಪುಟದಲ್ಲಿ ತೀರ್ಮಾನ ವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ ಸಚಿವ ಮಾಧು ಸ್ವಾಮಿ ಸ್ಪಷ್ಟೀಕರಣ ನೀಡಿ, ಶಿಕ್ಷಣ ಸಚಿವರ ಹೇಳಿಕೆ ಸರಿಯಾಗಿದ್ದು, ಸುರೇಶ್ ಕುಮಾರ್ ಹೇಳಿದ್ದೇ ಅಧಿಕೃತ ಎಂದರು.

     ಇದಕ್ಕೂ ಮುನ್ನ ಮಾಧು ಸ್ವಾಮಿ ಮಾತನಾಡಿ, ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, 1 ರಿಂದ 7 ನೇ ತರಗತಿವರೆಗೆ ಆನ್ಲೈನ್ ತರಗತಿಗಳು ನಡೆಸದಿರಲು ತೀರ್ಮಾನಿಸಲಾಗಿದೆ. ಇದು ಸಚಿವ ಸಂಪುಟದ ತೀರ್ಮಾನವಾಗಿ ಇದ್ದು ಕೂಡಲೇ ಶಿಕ್ಷಣ ಇಲಾಖೆಯ ಮೂಲಕ ಈ ಮಾಹಿತಿಯನ್ನು ತಲುಪಿಸಲು ತೀರ್ಮಾನಿಸಲಾಗಿದೆ ಎಂದರು.

     ಈಗಾಗಲೇ ರಾಜ್ಯ ಸರ್ಕಾರ ನಿಗದಿಪಡಿಸಿರುವ ದಿನಾಂಕದಂದು ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದೆ. ಯಾವುದೇ ಕಾರಣಕ್ಕೂ ದಿನಾಂಕ ಬದಲಿಸುವ ಇಲ್ಲವೇ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿಲ್ಲ. ಬೇರೆ ರಾಜ್ಯಗಳಲ್ಲಿ ಪರೀಕ್ಷೆ ರದ್ದುಗೊಳಿಸಿರುವ ಮಾಹಿತಿಯಿದೆ. ರಾಜ್ಯದಲ್ಲೂ ಎಸ್.ಎಸ್.ಎಲ್.ಸಿ. ಪರೀಕ್ಷೆ ರದ್ದುಗೊಳಿಸಬೇಕು ಎಂದು ಕೆಲ ವರ್ಗದಿಂದ ಬೇಡಿಕೆ ಇದೆ. ಪರೀಕ್ಷೆ ರದ್ದುಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link