ಹೊನ್ನಾಳಿ:
ಖಾಸಗಿ ಬಸ್ನ ಮುಂದಿನ ಚಕ್ರ ಸಿಡಿದ ಪರಿಣಾಮ ಬಸ್ ಚಾಲಕ ಸೇರಿದಂತೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 16 ಪ್ರಯಾಣಿಕರು ಗಾಯಗೊಂಡಿರುವ ದುರ್ಘಟನೆ ಸೋಮವಾರ ಸಂಜೆ ತಾಲೂಕಿನ ಸೊರಟೂರು ಗ್ರಾಮದ ಬಳಿ ಹೊನ್ನಾಳಿ-ಶಿಕಾರಿಪುರ ರಸ್ತೆಯಲ್ಲಿ ಸಂಭವಿಸಿದೆ. ಗಾಯಾಳುಗಳನ್ನು ಹೊನ್ನಾಳಿಯ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ಬಸ್ ಶಿವಮೊಗ್ಗದಿಂದ ನ್ಯಾಮತಿ, ಕೆಂಚಿಕೊಪ್ಪ, ಜೀನಹಳ್ಳಿ, ಕತ್ತಿಗೆ ಕ್ರಾಸ್ ಮಾರ್ಗವಾಗಿ ಹೊನ್ನಾಳಿ ಮೂಲಕ ರಾಣೇಬೆನ್ನೂರಿಗೆ ತೆರಳಬೇಕಿತ್ತು.ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ