ಕಾರೇಹಳ್ಳಿಯ ವಿದ್ಯುತ್ ಕಂಬ ಬದಲಾಯಿಸಿ

ಹುಳಿಯಾರು:

    ಹುಳಿಯಾರು ಸಮೀಪದ ಕಾರೇಹಳ್ಳಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಶೀಥಿಲಗೊಂಡಿರುವ ವಿದ್ಯುತ್ ಕಂಬ ಬದಲಾಯಿಸಿ ಮುಂದಾಗುವ ಅನಾಹುತ ತಪ್ಪಿಸುವಂತೆ ದೇವಸ್ಥಾನದ ಅಭಿವೃದ್ಧಿ ಕಮಿಟಿ ಮನವಿ ಮಾಡಿದೆ.

    ದೇವಸ್ಥಾನಕ್ಕೆ ಮತ್ತು ಇಲ್ಲಿನ ಕೊಠಡಿಗಳು, ಭವನಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಮೂರ್ನಲ್ಕು ದಶಕಗಳಿಗೂ ಹಿಂದೆ ವಿದ್ಯುತ್ ಕಂಬ ನೆಡಲಾಗಿತ್ತು. ಈಗ ಈ ಕಂಬ ಸಿಮೆಂಟ್ ಉದಿರಿ ಕಂಬದೊಳಗಿನ ಕಬ್ಬಿಣವೂ ಸಹ ತುಕ್ಕುಹಿಡಿದು ಬಲ ಕಳೆದುಕೊಂಡಿದೆ. ಪರಿಣಾಮ ಭಾರಿ ಗಾಳಿ ಬಂದರೆ ಸಾಕು ಬೀಳುವಂತೆ ಸಂಪೂರ್ಣ ಕಂಬ ಶಿಥಿಲಗೊಂಡಿದೆ.

    ದೇವಸ್ಥಾನಕ್ಕೆ ನಿತ್ಯ ಪೂಜೆಗೆ ಭಕ್ತರು ಬರುತ್ತಾರಲ್ಲದೆ ಜಾತ್ರೆ, ವಿಶೇಷ ದಿನಗಳಲ್ಲಿ ಜನಸಾಗರವೇ ಹರಿದು ಬರುತ್ತದೆ. ಅಲ್ಲದೆ ಭಕ್ತರು ಇಲ್ಲಿ ಜನ ಸೇರಿಸಿ ಮದುವೆ ಸೇರಿದಂತೆ ಶುಭಕಾರ್ಯಗಳನ್ನು ಸಹ ಮಾಡುತ್ತಾರೆ. ಬಹುಮುಖ್ಯವಾಗಿ ಶಿಥಿಲಗೊಂಡಿರುವ ಕಂಬ ಕೆಳಗೆ ಜನರು ಓಡಾಡುತ್ತಾರೆ. ಹಾಗಾಗಿ ಎಚ್ಚರ ತಪ್ಪಿದರೆ ಭಾರಿ ಅನಾವುತ ಸಂಭವಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

   ಹಾಗಾಗಿ ಶಿಥಿಲಗೊಂಡಿರುವ ಕಂಬವನ್ನು ಬದಲಾವಣೆ ಮಾಡಿ ಅನಾಹುತ ತಪ್ಪಿಸುವಂತೆ ಕಳೆದ 2 ವರ್ಷದ ಹಿಂದೆ ಹುಳಿಯಾರು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತಾದರೂ ಸ್ಪಂಧಿಸಿಲ್ಲ. ಜಾತ್ರೆಯ ಸಂದರ್ಭದಲ್ಲಿ ಬಂದ ಬೆಸ್ಕಾಂ ಸಿಬ್ಬಂದಿಗಳಿಗೆ ಖುದ್ದು ಕಂಬ ತೋರಿಸಿ ಬದಲಾವಣೆಗೆ ಕಮಿಟಿ ಒತ್ತಡ ಹಾಕಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಕಂಬ ಬದಲಾಯಿಸುವಂತೆ ಕಮಿಟಿಯವರು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link