ರೌಡಿ ವಿಜಯ ಬರ್ಬರ ಹತ್ಯೆ..!!

ಬೆಂಗಳೂರು

     ಕುಖ್ಯಾತ ರೌಡಿ ವಿಜಯ್ ಅಲಿಯಾಸ್ ವಿಜಿಯ ಕುತ್ತಿಗೆ ಎದೆ ಇನ್ನಿತರ ಕಡೆಗಳಲ್ಲಿ ಸ್ನೇಹಿತರೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

     ಗೊರಗುಂಟೆಪಾಳ್ಯದ ವಿಜಯ್ ಅಲಿಯಾಸ್ ವಿಜಿ(29) ಕಾರು ಚಾಲಕನಾಗಿದ್ದಾನೆ.ವಿಜಿಯ ಎದೆ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

      ಕಾರಿನಲ್ಲಿ ಕರೆತಂದಿದ್ದ ಸ್ನೇಹಿತರು ಊಟಕ್ಕಾಗಿ ಹುಡುಕಾಟ ನಡೆಸಿ ಮುಂಜಾನೆ 3.30ರ ವೇಳೆ ಯಶವಂತಪುರದ ಆರ್‍ಟಿಓ ಬಳಿಯ ಜಾಮೀಯ ಮಸೀದಿ ಬಳಿಗೆ ಬಂದು ಎಲ್ಲಿಯೂ ಊಟ ದೊರೆಯದಿದ್ದರಿಂದ ಜಗಳ ಮಾಡಿಕೊಂಡಿದ್ದಾರೆ.

      ಜಗಳ ವಿಕೋಪಕ್ಕೆ ತಿರುಗಿದಾಗ ವಿಜಿಯ ಕುತ್ತಿಗೆಯ ಬಳಿ ಏಳೆಂಟು ಬಾರಿ ಚಾಕುವಿನಿಂದ ಇರಿದು ಕಾರಿನಿಂದ ಹೊರಗೆ ತಳ್ಳಿ ಪರಾರಿಯಾಗಿದ್ದು ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಕೊಲೆಯತ್ನ,ಸುಲಿಗೆ,ಬೆದರಿಕೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ವಿಜಿ ಪೀಣ್ಯ ಇನ್ನಿತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳನ್ನು ನಡೆಸಿದ್ದು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿದ್ದ

       ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹಾಗೂ ಯಶವಂತಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೊಲೆಗೈದ ವಿಜಿಯ ಸ್ನೇಹಿತರ ಸುಳಿವು ಸಿಕ್ಕಿದೆ.ಕೃತ್ಯದ ನಡೆದ ಸ್ಥಳದಲ್ಲಿ ದೊರೆತಿರುವ ಸಿಸಿಟಿವಿ ಕ್ಯಾಮಾರ ದೃಶ್ಯಾವಳಿಯನ್ನು ಪರಿಶೀಲಿಸಿದ್ದು ಅದಷ್ಟು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಶಶಿಕುಮಾರ್ ಹೇಳಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap