ಶಾರದಮ್ಮ ಅಂತಿಮ ನಮನ

ಪಾವಗಡ

      ಕಾರ್ಮಿಕ ಸಚಿವ ವೆಂಕಟರವಣಪ್ಪನವರ ಧರ್ಮಪತ್ನಿ ಶಾರದಮ್ಮನವರ ಅಂತ್ಯಕ್ರಿಯೆಯನ್ನು ಗುರುವಾರ ಸಂಜೆ 5 ಗಂಟೆಗೆ ಹನುಮಂತನಹಳ್ಳಿಯ ಹೊಸ ತೋಟದ ಆವರಣದಲ್ಲಿ ನೆರವೇರಿಸಲಾಯಿತು.

      ಸಚಿವರ ಪತ್ನಿ ಶಾರದಮ್ಮ ಬುಧವಾರ ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಮೃತರ ಪಾರ್ಥಿವ ಶರೀರವನ್ನು ಹನುಮಂತನಹಳ್ಳಿ ಗ್ರಾಮದ ಸಚಿವರ ಸ್ವಗ್ರಹದಲ್ಲಿ ಇರಿಸಲಾಗಿತ್ತು.

      ಸಚಿವರಾದ ವೆಂಕಟರವಣಪ್ಪ, ಪುತ್ರ ಎಚ್.ವಿ.ಕುಮಾರಸ್ವಾಮಿ, ಎಚ್.ವಿ.ವೆಂಕಟೇಶ್ ಮೃತರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

       ಪಕ್ಕದ ಚಳ್ಳಕೆರೆ ತಾಲ್ಲೂಕಿನ ಕಮತ್‍ಮರಿಕುಂಟೆ ಗ್ರಾಮದ ದಾಸಬೋವಿ ಮತ್ತು ಸಾಲಕ್ಕ ದಂಪತಿಗಳ 2 ನೇ ಪುತ್ರಿಯಾದ ಶಾರದಮ್ಮ , ವೆಂಕಟರವಣಪ್ಪ ರಾಜಕೀಯದಲ್ಲಿ ಮೇಲುಗೈ ಸಾಧಿಸಲು ಶ್ರಮ ಪಟ್ಟಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ.

        ತುಮಕೂರು ಜಿಲ್ಲಾ ಎಸ್.ಪಿ.ದಿವ್ಯಾಗೋಪಿನಾಥ್, ಡಿ.ವೈ.ಎಸ್.ಪಿ. ಧರಣೇಶ್ ಖುದ್ದು ಹಾಜರಿದ್ದರು. ಹನುಮಂತನಹಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಬಾರಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅಂತಿಮ ದರ್ಶನ ಪಡೆಯಲು ನೂಕುನುಗ್ಗಲುಂಟಾಗದಂತೆ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಹಾಕಲಾಗಿತ್ತು.

        ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಗುರುವಾರ ಬೆಳಗಿನಿಂದಲೆ ತಾಲ್ಲೂಕು ಅಲ್ಲದೆ ಪಕ್ಕದ ಚಿತ್ರದುರ್ಗ ಜಿಲ್ಲೆಯಿಂದ ಹಾಗೂ ಆಂಧ್ರಪ್ರದೇಶದಿಂದ ನೂರಾರು ಕಾರ್ಯಕರ್ತರು ಅಂತಿಮ ದರ್ಶನ ಪಡೆದುಕೊಂಡರು.

          ಸಣ್ಣಕೈಗಾರಿಕಾ ಸಚಿವರಾದ ಗುಬ್ಬಿಶ್ರೀನಿವಾಸ್, ಎಂ.ಎಲ್.ಸಿ.ಬೆಮಲ್ ಕಾಂತರಾಜು, ಮಧುಗಿರಿ ಶಾಸಕರಾದ ವೀರಭದ್ರಯ್ಯ, ಗೂಳಿಹಟ್ಟಿಶೇಖರ್, ಬಿ.ಜೆ.ಪಿ. ಎಂ.ಎಲ್. ಸಿ. ನಾರಾಯಣಸ್ವಾಮಿ, ಅಂಧ್ರದ ಶಿಶು ಅಭಿವೃದ್ಧಿ ಸಚಿವೆ ಪರಿಟಾಲ ಸುನೀತ ಮತ್ತು ಪುತ್ರ ಪರಿಟಾಲ ಶ್ರೀರಾಂ, ಆಂಧ್ರದ ಕೆ.ಪಿ.ಸಿ.ಸಿ. ಸದಸ್ಯ ರಘುವೀರಾರೆಡ್ಡಿ, ಮಾಜಿ ಸಚಿವ ಎಚ್. ಅಂಜನೇಯಲು, ಸಂಸದರಾದ ಎನ್. ಚಂದ್ರಪ್ಪ, ಮುದ್ದಹನುಮೇಗೌಡ, ಹೊಳಲ್ಕರೆ ಶಾಸಕ ಚಂದ್ರಪ್ಪ, ಚಳ್ಳಕೆರೆ ಶಾಸಕ ರಘುನಾಥ್, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ಮತ್ತು ಪತ್ನಿ ಶಾಂತಲಾರಾಜಣ್ಣ, ಸುರೇಶ್‍ಗೌಡ, ಕೆ.ಎಂ.ತಿಮ್ಮರಾಯಪ್ಪ, ಸೋಮ್ಲಾನಾಯ್ಕ, ಉಗ್ರನರಸಿಂಹಪ್ಪ, ಹಿರಿಯ ಕಾಂಗ್ರೆಸ್ ಮುಖಂಡ ಜಿ.ಎಸ್.ಧರ್ಮಪಾಲ್, ಟಿ.ಎನ್.ನರಸಿಂಹಯ್ಯ, ಪ್ರಜಾಪ್ರಗತಿ ದಿನ ಪತ್ರಿಕೆಯ ಸಂಪಾದಕ ಎಸ್. ನಾಗಣ್ಣ, ಬೋವಿ ಸಮಾಜದ ಸ್ವಾಮೀಜಿಯಾದ ಹಿಮ್ಮಡಿಸಿದ್ದರಾಮೇಶ್ವರ, ಎಸ್‍ಬಿಐ ನ ನಿವೃತ್ತ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಜಯರಾಮಯ್ಯ, ಮಾಜಿ ಎಂ.ಎಲ್.ಸಿ. ಹುಲಿನಾಯ್ಕರ್, ಆರ್.ಎಂ.ಸಿ. ಅಧ್ಯಕ್ಷ ರವಿ, ಬ್ಲಾಕ್ ಕಾಂಗ್ರೆಸ್ ಅಧಕ್ಷ ಸುದೇಶ್ ಬಾಬು, ಕಾಂಗ್ರೆಸ್ ಮುಖಂಡರಾದ ಪಿ.ಎಚ್.ರಾಜೇಶ್, ಬಾಲಸುಬ್ರಮಣ್ಯಂ, ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿ ಅಧ್ಯಕ್ಷ ರವಿ, ಮಾಜಿ ಅಧ್ಯಕ್ಷ ಮಂಜುನಾಥ್, ಬಿ.ಜೆ.ಪಿ ಮುಖಂಡರಾದ ಶಿವಪ್ರಸಾದ್, ಗಿರೀಶ್, ರೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಅನಿಲ್, ಕೋಳಿಬಾಲಾಜಿ, ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಸುರೇಶ್, ಬೊಟ್ಟುವೆಂಕಟೇಶ್, ಬಂಗಾರಪ್ಪ , ತಹಸೀಲ್ದಾರ್ ವರದರಾಜು, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು ಅಂತಿಮ ದರ್ಶನ ಪಡೆದುಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap