ಬರಗೂರು
ಮನೆ, ಗ್ರಾಮಗಳಲ್ಲಿ ಶುಚಿತ್ವ ಇದ್ದರೆ ಯಾವುದೇ ಕಾಯಿಲೆ ಬಾರದಂತೆ ಉತ್ತಮ ಆರೋಗ್ಯವಂತರಾಗಿರಲು ಸಾಧ್ಯ ಎಂದು ಬರಗೂರು ಸರ್ಕಾರಿ ಆಸ್ಪತ್ರೆಯ ಡಾ.ನಂದೀಶ್ ಸಲಹೆ ನೀಡಿದರು.
ಅವರು ಸಿರಾ ತಾಲ್ಲೂಕು ಬರಗೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ, ಚಿಕನ್ ಗುನ್ಯ ವಿರೋಧಿ ಮಾಸಾಚರಣೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಡೆಂಗ್ಯೂ, ಚಿಕನ್ ಗುನ್ಯ ಇವುಗಳಿಗೆ ಯಾರೂ ಭಯ, ಆತಂಕ ಪಡುವ ವಿಚಾರವೆ ಇಲ್ಲ. ಕಾಯಿಲೆ ಇದೆ ಎಂದು ತಿಳಿದಾಗ ವೈದ್ಯರ ಬಳಿ ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಪ್ರತಿಯೊಂದು ಕಾಯಿಲೆಯಿಂದಲೂ ಪಾರಾಗಬಹುದು. ಶುಚಿಯಾದ ಪರಿಸರ ಕಲ್ಪಿಸಿಕೊಂಡು ಕಾಯಿಲೆಗಳನ್ನು ಬರದಂತೆ ತಡೆಯೋಣ ಎಂದರು.
ಆರೋಗ್ಯ ಇಲಾಖೆಯ ಡಾ.ರಾಜು, ಕೆಎನ್ ರಮೇಶ್, ಭೀಮಣ್ಣ, ಮನುಕಿರಣ್, ಲತಾ, ಸಿದ್ದಗಂಗಮ್ಮ ಆಶಾ ಕಾರ್ಯಕರ್ತೆಯರು ಇದ್ದರು.