ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ : ಪೂರ್ವಭಾವಿ ಸಭೆ

ಕೊರಟಗೆರೆ

        ಪಟ್ಟಣದ ತಾಲ್ಲೂಕು ಕಚೆರಿ ಸಭಾಂಗಣದಲ್ಲಿ ಜ.15 ರ ಮಂಗಳವಾರ ನಡೆಯಲಿರುವ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯ ಪೂರ್ವಭಾವಿ ಸಭೆ ತಹಸೀಲ್ದಾರ್ ನಾಗರಾಜು ಅಧ್ಯಕ್ಷತೆಯಲ್ಲಿ ಜ.10 ರಂದು ಗುರುವಾರ ನಡೆಯಿತು.

           ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್, ಆದರ್ಶ ಪುರುಷರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಸರ್ಕಾರವು ಸಾರ್ವಜನಿಕರ ಹಾಗೂ ಸಮುದಾಯಗಳ ಸಹಭಾಗಿತ್ವದಲ್ಲಿ ಜಯಂತಿಗಳನ್ನು ಆಚರಿಸುತ್ತಿದೆ.

          ಪದ್ದತಿಯಂತೆ ತಾಲ್ಲೂಕು ಆಡಳಿತ ಜ.15 ರಂದು ಸಾಕೇತಿಕವಾಗಿ ತಾಲ್ಲೂಕು ಕಚೆರಿ ಸಭಾಂಗಣದಲ್ಲಿ ನಡೆಸಿ ನಂತರ ಸಮುದಾಯದ ಸಹಭಾಗಿತ್ವದಲಿ ಮುಖಂಡರ ಮನವಿ ಮೇರೆಗೆ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಮುಂದಿನ ತಿಂಗಳು ಫೆಬ್ರ್ರುವರಿಯಲ್ಲಿ ಪಟ್ಟಣದಲ್ಲಿ ಅದ್ದೂರಿ ವೇದಿಕೆಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರದ ಮೆರವಣಿಗೆಯೊಂದಿಗೆ ಕಾರ್ಯಕ್ರಮ ನಡೆಸುವಂತೆ ತೀರ್ಮಾನಿಸಿರುವುದಾಗಿ ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ತಾ.ಪಂ. ಇಲಾಖೆಯ ನಾಗರಾಜು, ಡಾ.ಶಶಿಕುಮಾರ್, ಧನಂಜಯ, ಕೃಷಿ ಇಲಾಖೆಯ ಶಿವಪ್ರಕಾಶ್, ಕಂದಾಯ ಇಲಾಖೆಯ ನರಸಿಂಹಮೂರ್ತಿ, ಸಬ್‍ರಿಜಸ್ಟ್ರಾರ್ ಪರಶಿವಮೂರ್ತಿ, ಬಿಇಓ ಕಚೆರಿಯ ರಾಜಣ್ಣ, ತಾ.ಪಂ. ಸದಸ್ಯ ಹಾಗೂ ಬೋವಿ ಸಮುದಾಯದ ತಾಲ್ಲೂಕು ಅಧ್ಯಕ್ಷ ವೆಂಕಟಪ್ಪ, ಗೌರವಾಧ್ಯಕ್ಷ ತುಂಬಾಡಿ ನರಸರಾಜು, ಪದಾಧಿಕಾರಿಗಳಾದ ಪ.ಪಂ.ಮಾಜಿ ಸದಸ್ಯ ಹನುಮಂತರಾಯಪ್ಪ, ಯಲ್ಲಪ್ಪ, ವೆಂಕಟಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link