ಬೆಂಗಳೂರು
ರಾಮನಗರದಿಂದ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವ ಹಿಂದೆ ನನ್ನ ಪಾತ್ರವಿಲ್ಲ. ಇದಕ್ಕೆ ನಾವು ಕಾರಣರಲ್ಲ ಎಂದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ ಅವರು, ಅನ್ಯ ಪಕ್ಷಗಳಿಂದ ಬರುವವರನ್ನು ಬಿಜೆಪಿಯವರು ಯಾವ ರೀತಿ ಪರಿಗಣಿಸುತ್ತಾರೆ ಎಂಬುದಕ್ಕೆ ಚಂದ್ರಶೇಖರ್ ಅವರು ಪಕ್ಷದಿಂದ ಹೊರಬಂದಿರುವುದೇ ತಾಜಾ ಉದಾಹರಣೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಇದ್ದ ಆತುರ-ಕಾತುರ ಈಗ ಬಿಜೆಪಿಯಲ್ಲಿ ಕಾಣುತ್ತಿಲ್ಲ ಎಂದರು.
ನಾವು ಯಾರಿಗೂ ಆಮಿಷವೊಡ್ಡುವ ಅಗತ್ಯವಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ನಾವು ನಾಮಪತ್ರ ಸಲ್ಲಿಸಿದ ನಂತರ ರಾಮನಗರಕ್ಕೆ ಹೋಗಲಿಲ್ಲ. ಮತ ಕೇಳಲಿಲ್ಲ. ರಾಮನಗರದ ಜನರೇ ನಮ್ಮನ್ನು ಆಯ್ಕೆ ಮಾಡಿದ್ದರು. ಕೊನೆ ಉಸಿರಿರುವರೆಗೂ ರಾಮನಗರ ಜನತೆಯನ್ನು ಸ್ಮರಿಸುತ್ತೇನೆ ಎಂದು ಹೇಳಿದರು. ಟಿಪ್ಪು ಜಯಂತಿ ಆಚರಣೆ ಹಿಂದಿನ ಸರ್ಕಾರದ ಅಧಿಕೃತ ಕಾರ್ಯಕ್ರಮ ಅದನ್ನು ಮುಂದುವರೆಸುತ್ತೇವೆ ಎಂಬ ಸುಳಿವನ್ನು ಕುಮಾರಸ್ವಾಮಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
