ಪಶ್ಚಿಮ ಬಂಗಾಳ:
ರಾಜ್ಯದ ಟಿಎಂಸಿ ಸರ್ಕಾರ ನಮ್ಮ ಮೇಲೆ ದ್ವೇಶದ ರಾಜಕಾರಣ ನಡೆಸುತ್ತಿದ್ದು “ಅವರ ಕಾರ್ಯಕರ್ತರು ನಿಮ್ಮ ಮೇಲೆ ದಾಳಿ ಮಾಡಿದರೆ ನೀವು ಅಳುತ್ತಾ ಬರಬೇಡಿ” ನೀವು ತಕ್ಕ ಉತ್ತರ ಕೊಡಿ ಎಂದು ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ
ಪೊಲೀಸರು ಸರ್ಕಾರದ ಕೀಲು ಗೊಂಬೆಗಳಾಗಿದ್ದಾರೆ ನಮ್ಮ ಕಾರ್ಯಕರ್ತರ ವಿರುದ್ದ ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ ಇದು ಟಿಎಂಸಿಯ ಕೀಳು ಮಟ್ಟದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ.
“ಪ್ರತಿದಿನ ನಮ್ಮ ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರಿಂದ ಹಲ್ಲೆ ನಡೆಯುತ್ತಿದ್ದರು. ಕ್ರಮ ತೆಗೆದುಕೊಳ್ಳುವ ಬದಲು, ಪೊಲೀಸರು ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ಹಾಕುತ್ತಿದ್ದಾರೆ. ನಮ್ಮ ಕಾರ್ಯಕರ್ತರನ್ನು ಟಿಎಂಸಿಯವರು ಥಳಿಸಿದರೆ, ನನ್ನ ಬಳಿ ಅಳಲು ಬರಬೇಡಿ ಎಂದು ಕೇಳಿದ್ದೇನೆ. ಸೇಡು ತೀರಿಸಿಕೊಂಡ ನಂತರ ನನ್ನ ಬಳಿಗೆ ಬನ್ನಿ. ಅವರ ಭಾಷೆಯಲ್ಲಿಯೇ ಟಿಎಂಸಿಗೆ ಉತ್ತರಿಸಲು ನಾನು ಅವರಿಗೆ ಹೇಳಿದ್ದೇನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








