ಸಾಲಮನ್ನಾ ಮಾಡಬೇಡಿ ಎಂದ ಆರ್ ಬಿ ಐ…!!

ನವದೆಹಲಿ:
        ರಾಜ್ಯಗಳ ಮಹತ್ವಾಕಾಂಕ್ಷಿ ಹಾಗು ಸರ್ವೇ ಸಾಮಾನ್ಯ ಚುನಾವಣಾ ಭರವಸೆಗಳಲ್ಲೊಂದಾದ ರೈತರ ಕೃಷಿ ಸಾಲಮನ್ನಾಕ್ಕೆ  ಕಡಿವಾಣ ಹಾಕುವಂತೆ ಆರ್‌ಬಿಐ ಎಲ್ಲಾ ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ.
       ಇದಲ್ಲದೆ ರಾಜ್ಯ ಸರ್ಕಾರಗಳು ಮಾಡಿರುವ ಸಾಲಮನ್ನಾ ನಿರ್ಧಾರದಿಂದ ಭವಿಷ್ಯದಲ್ಲಿ ಬ್ಯಾಂಕ್ ಗಳು ಕೃಷಿ ಸಾಲ ವಿತರಣೆ ಮಾಡುವಲ್ಲಿ ದೊಡ್ಡ ಪ್ರಮಾಣದಲ್ಲಿ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
        ಸಾಲಮನ್ನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೂ ಸಾಲಮನ್ನ ಘೋಷಣೆ ಮಾಡಬಹುದು ಎಂಬ ದೂರ ದೃಷ್ಟಿಯಿಂದ ಆರ್ ಬಿ ಎ ಕೇಂದ್ರಕ್ಕೂ ಸಹ ಎಚ್ಚರಿಕೆ ನೀಡಿದೆ.
        ಸಾಲಮನ್ನಾಕ್ಕೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ಕೃಷಿ ಸಾಲ ವಿತರಣೆ ಕುಂಠಿತವಾಗುವ ಅಪಾಯವಿದೆಯೆಂದು ತಿಳಿಸಿದೆ. ಅಲ್ಲದೆ ಬ್ಯಾಂಕ್‌ ಕಾರ್ಯಾಚರಣೆ, ಠೇವಣಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಆರ್ ಬಿಐ ಎಚ್ಚರಿಕೆ ನೀಡಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link