ಚಲಿಸುತ್ತಿದ್ದ ಬೈಕಿಗೆ ಹೊತ್ತಿಕೊಂಡ ಬೆಂಕಿ : ಸವಾರ ಪಾರು

ಹೈದರಾಬಾದ್‌ :

     ಚಲಿಸುತ್ತಿದ್ದ ಬೈಕಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಚಾಲಕ ಬೈಕ್ ನಿಲ್ಲಿಸಿ ನಂದಿಸಲು ಹೋದ ವೇಳೆ ಟ್ಯಾಂಕ್ ಸ್ಫೋಟಗೊಂಡಿದೆ.

     ತೆಲಂಗಾಣ ರಾಜಧಾನಿ ಹೈದರಾಬಾದಿನ ಪಾತಬಸ್ತಿಯ ಭವಾನಿ ನಗರದ ಮುಘಲ್ ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತನ್ನ ಬೈಕಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಚಾಲಕ ನಂದಿಸಲು ಮುಂದಾಗಿದ್ದಾನೆ.

    ಇದನ್ನು ಗಮನಿಸಿದ ಸ್ಥಳೀಯರು ಸಹ ಸಹಾಯಕ್ಕೆ ಬಂದಿದ್ದು, ನೀರು ಚಿಮುಕಿಸಿ ಬೆಂಕಿ ನಂದಿಸಲು ಹೋದ ವೇಳೆ ಟ್ಯಾಂಕ್ ಸ್ಫೋಟಗೊಂಡಿದೆ. ಇದರ ಪರಿಣಾಮ 10 ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

   ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಯಾವ ಕಾರಣಕ್ಕೆ ಬೈಕಿಗೆ ಬೆಂಕಿ ತಗುಲಿದೆ ಎಂಬುದರ ಪರಿಶೀಲನೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap