ಬೆಂಗಳೂರು :
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡುವಂತೆ ಜೆಡಿಎಸ್ ವರಿಷ್ಟರಿಗೆ ವಿಶ್ವನಾಥ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ ವಿಶ್ವನಾಥ್, ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ಈಗಾಗಲೇ ರಾಜೀನಾಮೆ ನೀಡಿದ್ದು, ಆ ಸ್ಥಾನವನ್ನು ಮಧುಬಂಗಾರಪ್ಪ ಅವರಿಗೆ ನೀಡಬೇಕೆಂದು ಸಲಹೆ ನೀಡಿರುವಾಗಿ ತಿಳಿಸಿದರು.
ಜಡಗೊಂಡ ಆಡಳಿತ ಹಾಗೂ ಅಧಿಕಾರಿಗಳನ್ನು ಎಚ್ಚರಿಸಲು ಗ್ರಾಮವಾಸ್ತವ್ಯ ಸಹಕಾರಿಯಾಗಿದ್ದು, ಜನರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಹೀಗಾಗಿ ಅದರ ಪರಿಹಾರಕ್ಕಾಗಿ ಸಿಎಂ ಮಾತ್ರವಲ್ಲ. ಜಿಲ್ಲಾಧಿಕಾರಿಗಳೂ ಗ್ರಾಮವಾಸ್ತವ್ಯ ಮಾಡಬೇಕು ಎಂದು ತಿಳಿಸುವ ಮೂಲಕ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಅರಸರ ಕಾಲದಲ್ಲಿ ಜನ ದೂರು ಹೇಳಿಕೊಂಡು ಬಂದಾಗ, ಇದು ಆಡಳಿತದ ವೈಫಲ್ಯ ಎಂದು ತಮಗೆ ಆಪ್ತರಾಗಿದ್ದ ಜಿಲ್ಲಾಧಿಕಾರಿಯನ್ನೇ ಅರಸರು ಎತ್ತಂಗಡಿ ಮಾಡಿದ್ದನ್ನು ಈ ವೇಳೆ ಸ್ಮರಿಸಿಕೊಂಡಿದ್ದಾರೆ.
ಸಾತ್ವಜನಿಕ ಲೆಕ್ಕ ಪತ್ರ ಸಮಿತಿ ನೀಡುವ ಶಿಫಾರಸುಗಳನ್ನು ಅನುಷ್ಟಾನಗೊಳಿಸಲು ಪ್ರತ್ಯೇಕ ಹಣಕಾಸು ಸಚಿವರು ಇರಬೇಕು ಎಂಬ ಸಲಹೆ ನೀಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಮುಖ್ಯಮಂತ್ರಿಗಳೇ ಹಣಕಾಸು ಖಾತೆ ಇಟ್ಟುಕೊಳ್ಳುವುದರಿಂದ ಈ ಕೆಲಸ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
