ಆಪರೇಷನ್ ಕಮಲದ ‘ಆಡಿಯೋ ಕ್ಲಿಪ್’ ರಿಲೀಸ್!!!

ಬೆಂಗಳೂರು :

 

      ದೋಸ್ತಿ ಸರ್ಕಾರದ ಬಜೆಟ್ ಮಂಡನೆಗೂ ಮುನ್ನ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿದ್ದು, ಬಿಜೆಪಿ ಆಪರೇಷನ್ ಕಮಲದ ಆಡಿಯೋ ರಿಲೀಸ್ ಮಾಡಿ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ.

     ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕರೆದಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಗುರುಮಿಟ್ಕಳ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರನ್ನು ಬಿಜೆಪಿಗೆ ಸೆಳೆಯಲು ಮುಂದಾಗಿದ್ದ ಬಿಎಸ್‌ಯಡಿಯೂರಪ್ಪ ಅವರ ಸಂಭಾಷಣೆ ಇರುವ 40 ನಿಮಿಷಗಳ ಆಡಿಯೋ ಕ್ಲಿಪ್​ ಅನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.      

    ನಂತರ ಮಾತನಾಡಿದ ಸಿಎಂ, ಸದಾನಂದಗೌಡರು, ಬಿಎಸ್. ಯಡಿಯೂರಪ್ಪ, ಆರ್. ಅಶೋಕ್ ಏನೆಲ್ಲ ಹೇಳಿಕೆ ನೀಡಿದ್ದರು? ವಿರೋಧ ಪಕ್ಷವಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದೇವೆ ಜೆಡಿಎಸ್ -ಕಾಂಗ್ರೆಸ್ ಶಾಸಕರನ್ನು ನಾವು ಮುಟ್ಟೇ ಇಲ್ಲ ಅಂದಿದ್ದರು. ಆದರೆ ದೇವದುರ್ಗಕ್ಕೆ ಬರುವಂತೆ ನಮ್ಮ ಸರ್ಕಾರದ ಕೆಲವು ಶಾಸಕರಿಗೆ ಬಿಎಸ್ ವೈ ಆಹ್ವಾನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

      ಬಜೆಟ್ ಮಂಡನೆಗೆ ಬಿಜೆಪಿ ತೊಂದರೆ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಿಜೆಪಿಗೆ ಕಿಂಚಿತ್ತಾದರೂ ಗೌರವ ಇದ್ದರೆ ಇಂತಹ ವರ್ತನೆಯನ್ನು ಬದಿಗಿಡಬೇಕು ಎಂದಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ