ಅಸಮಾನತೆ ಹೆಚ್ಚಿದಾಗ ಮಹಾ ಪುರುಷರ ಉದಯ

ತಿಪಟೂರು:

 ನಗರದ ತಾಲೂಕು ಕಚೇರಿಯ ಆಡಳಿತ ಭವನದಲ್ಲಿ ಸರಳವಾಗಿ ಜರುಗಿದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮತ್ತಿತರರು.

 

ನಿಂತ ನೀರಿನಲ್ಲಿ ಕ್ರಿಮಿಕೀಟಗಳು ಯಾವ ರೀತಿಯಲ್ಲಿ ಬೆಳೆಯುತ್ತವೆಯೊ ಅದೇ ರೀತಿ, ಚಲನೆನಿಂತ ಸಮಾಜದಲ್ಲಿ ಅನಿಷ್ಟ ಪದ್ಧತಿಗಳು ಜನಿಸುತ್ತವೆ. ಅಂತಹ ಸಮಯದಲ್ಲಿ ಮಹಾ ಮಹಿಮರು ಜನಿಸಿ ಸಮಾಜವನ್ನು ಪರಿವರ್ತಿಸುತ್ತಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ನಗರದ ತಾಲೂಕು ಕಚೇರಿಯ ಆಡಳಿತದ ಭವನದಲ್ಲಿ ಸರಳವಾಗಿ ಜರುಗಿದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲಕ್ಕೆ ತಕ್ಕಂತೆ ಪುಣ್ಯ ಪುರುಷರು ಹುಟ್ಟಿ, ಸಮಾಜದ ಓರೆ-ಕೋರೆಗಳನ್ನು ತಿದ್ದುತ್ತಾರೆ. ಸಮಾಜದಲ್ಲಿ ಯಾವಾಗೆಲ್ಲಾ ಅನಿಷ್ಟ ಪದ್ಧತಿಗಳು ಉದ್ಭವಿಸುತ್ತವೊ, ಅಂತಹ ಸಂದರ್ಭದಲ್ಲಿ ಮಹಾ ಪುರುಷರಿಗೆ ಜನ್ಮ ನೀಡುವುದು ಈ ನೆಲದ ವಿಶೇಷ. ಇದು ಶ್ರೀಕೃಷ್ಣ ಹೇಳಿದ ಗೀತೆಯಲ್ಲೂ ಸಹ ಉಲ್ಲೇಖವಾಗಿದೆ. ಈ ಭೂಮಿ ಕರ್ಮಭೂಮಿ, ಪುಣ್ಯಭೂಮಿ ಇಲ್ಲಿ ಯಾರಿಗೂ ಅನ್ಯಾಯವಾಗಬಾರದು ಎಂದು ಹೇಳಿದ್ದಾರೆ. ಇಂತಹ ಮಹಾ ಪುರುಷರಲ್ಲಿ ಕನಕದಾಸರು ಒಬ್ಬರು ಎಂದರು.

ಬಾಳೆಹಣ್ಣು ವಾಪಸ್ ತಂದ ಕನಕ :

ಕನಕದಾಸರು ವಿದ್ಯಾಭ್ಯಾಸಕ್ಕೆ ಹೋದ ಸಂದರ್ಭದಲ್ಲಿ ವ್ಯಾಸರಾಜರು ತನ್ನ ಶಿಷ್ಯರುಗಳಿಗೆ ಯಾರಿಗೂ ಕಾಣದಂತೆ ಬಾಳೆಹಣ್ಣು ತಿನ್ನಲ್ಲು ಕೊಡುತ್ತಾರೆ. ಈ ಸಂದರ್ಭದಲ್ಲಿ ಎಲ್ಲಾ ಶಿಷ್ಯರು ಯಾರು ಇಲ್ಲದ ಜಾಗದಲ್ಲಿ ಬಾಳೆಹಣ್ಣು ತಿನ್ನುತ್ತಾರೆ. ಆದರೆ ಕನಕದಾಸರು ನನಗೆ ಎಲ್ಲಾ ಕಡೆಯೂ ದೇವರು ಕಾಣುತ್ತಾನೆ, ಹಾಗಾಗಿ ಯಾರಿಗೂ ಕಾಣದಂತೆ ಹಣ್ಣು ತಿನ್ನಲಾಗಲಿಲ್ಲ ಎನ್ನುತ್ತಾರೆ. ದೇವರು ಸರ್ವಾಂತರ್ಯಾಮಿ, ದೇವರಿಲ್ಲದ ಸ್ಥಳವಿಲ್ಲ, ನಿಂತಲ್ಲೆ ಧ್ಯಾನಿಸಿದರೂ ದೇವರು ಸಿಗುತ್ತಾನೆ, ದೇವರನ್ನು ಹುಡುಕಬೇಡಿ ಎಂದ ಅವರು ಇಲ್ಲದ ಕುಲವನ್ನು ಹುಡಿಕಿಕೊಂಡು ಹೋಗಿ ಹೊಡೆದಾಡಬೇಡಿ ಇರುವುದೊಂದೆ ಕುಲ ಅದು ಮನುಷ್ಯ ಕುಲವೆಂದು ತಿಳಿಸಿದ ಮಹಾನ್ ಮಾನವತಾವಾದಿ ಕನಕದಾಸರು ಎಂದು ಬಿ.ಸಿ.ನಾಗೇಶ್ ನುಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ತಹಸೀಲ್ದಾರ್ ಚಂದ್ರಶೇಖರ್, ಪೌರಾಯುಕ್ತ ಉಮಾಕಾಂತ್, ಗ್ರೇಡ್-2 ತಹಶೀಲ್ದಾರ್ ರವಿಕುಮಾರ್, ಕುರುಬ ಸಮುದಾಯದ ಮುಖಂಡರಾದ ಲೋಕೇಶ್, ಚಂದ್ರೇಗೌಡ, ತರಕಾರಿ ಗಂಗಾಧರ್, ಗುಲಾಬಿ ಸುರೇಶ್, ಲಿಂಗರಾಜು ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link