ಗುಂಡಿ ಮುಚ್ಚಿ ಸಂಚಾರಕ್ಕೆ ಅನುವು ಮಾಡಿಕೊಡಲು ಸಾರ್ವಜನಿಕರ ಆಕ್ರೋಶ!!

 ತಿಪಟೂರು :

      ನಗರಸಭೆಯ ಕಾಮಗಾರಿಗಳು ಎಂದರೆ ಜನರಿಗೆ ಏನೋ ಒಂದು ತರಹ ಜಿಗುಪ್ಸೆ ಮೂಡಿದ್ದು ಸಮಸ್ಯೆಗಳಿದ್ದರು ನಗರಸಭೆಯವರಿಗೆ ಹೇಳಿದರೆ ಇನ್ನೊಂದು ಸಮಸ್ಯೆ ಸೃಷ್ಟಿಸುತ್ತಾರೆಂದು ಅಸಾಹಯಕತೆ ವ್ಯಕ್ತಪಡಿಸುವಂತಾಗಿದೆ.

      ಇದಕ್ಕೆ ಉದಾಹರಣೆ ಎಂಬಂತೆ ನಗರದ ವಾರ್ಡ್ ನಂಬರ್ 02 ರಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆಯ ಮಂಜುನಾಥ ಲಾಡ್ಜ್ ಹತ್ತಿರ ರಸ್ತೆ ಮಧ್ಯದಲ್ಲಿರುವ ಒಳಚರಂಡಿ ವ್ಯವಸ್ಥೆಯ ಸಂಪರ್ಕದ ಪೈಪ್‍ಲೈನ್ ಕಡಿತಗೊಂಡಿದ್ದಕ್ಕೆ ನಗರಸಭೆಯವರು ಯಂತ್ರಗಳ ಸಹಾಯದಿಂದ ಒಳಚರಂಡಿ ವ್ಯವಸ್ಥೆಯ ಚೇಂಬರ್ ಬ್ಲಾಕ್ ಆಗಿದ್ದನ್ನು ಸರಿಪಡಿಸಿದರು.

      ಪೈಪ್‍ಹೊಡೆದು ಸರಿಪಡಿಸಿರುವುದರಿಂದ ಯುಜಿಡಿ ನೀರು ಹರಿದು ಹೋಗುತ್ತಿದ್ದು ಒಂದು ಸಮಸ್ಯೆ ನಿವಾರಣೆಯಾಗಿದೆ. ಆದರೆ ಹೊಡೆದಿದ್ದ ಪೈಪ್ ಅನ್ನು ಸರಿಪಡಿಸಿ ಪೈಪ್ ಜೋಡಿಸಿಲ್ಲ ಇದಕ್ಕಾಗಿ ತೆಗೆದ ಗುಂಡಿಯನ್ನು ಮುಚ್ಚಿಲ್ಲ ಇದರಿಂದ ರಸ್ತೆ ಮದ್ಯದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದ್ದು ಇಲ್ಲಿನ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಇದರ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರೂ ಕಣ್ಣುಕಾಣದಂತೆ ವರ್ತಿಸುತ್ತಿರುವುದು ದೊಡ್ಡ ದುರಂತವಾಗಿದೆ.

      ಗಾಂಧಿನಗರದ ಮುಖ್ಯ ರಸ್ತೆಯಲ್ಲಿಯೂ ಇದೇ ರೀತಿ ಸಮಸ್ಯೆ ಇದ್ದು ನಗರಸಭೆಯವರು ಮಾತ್ರ ನಮಗೂ ಇದಕ್ಕು ಸಂಬಂಧವೇ ಇಲ್ಲವೆಂದು ದಿವ್ಯ ನಿರ್ಲಕ್ಷ ತಾಳಿದ್ದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link