ತಿಪಟೂರು : ಗುತ್ತಿಗೆದಾರನಿಂದ ಕೆರೆ ನೀರಿಗೆ ಕನ್ನ

 ತಿಪಟೂರು :

      ತೀವ್ರ ನೀರಿನ ಅಭಾವದಿಂದ ಪ್ರಜೆಗಳು ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಹಾಗೂ ಹಾಲು ಉತ್ಪಾದಕರ ಸಂಘದ ಚುನಾವಣೆಯನ್ನೇ ಬಹಿಷ್ಕರಿಸಿದ್ದಾರೆ ಆದರೆ ಇಲ್ಲೊಬ್ಬ ಗುತ್ತಿಗೆದಾರ ತನ್ನ ಕಾಮಗಾರಿಗಾಗಿ ಕೆರೆಯಲ್ಲಿರುವ ಅಲ್ಪನೀರನ್ನೆ ಕದಿಯಲು ಹೋಗಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.

      ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯಲ್ಲಿ ಹೊನ್ನವಳ್ಳಿ ಏತನೀರಾವರಿ ಮೂಲಕ ಸ್ವಲ್ಪ ಹೊನ್ನವಳ್ಳಿ ನೀರನ್ನು ತುಂಬಿಸಿದ್ದಾರೆ. ಇದರಿಂದ ಎಷ್ಟೂ ದನಕರುಗಳಿಗೆ, ಪ್ರಾಣಿಗಳಿಗೆ ನೀರಡಿಕೆಯನ್ನು ನೀಗಿಸುವ ಮರುಭೂಮಿಯ ಓಯಾಸಿಸ್‍ನಂತಹ ನೀರಿಗೆ ಗ್ಯಾರಘಟ್ಟ ರಸ್ತೆಯನ್ನು ನಿರ್ಮಿಸುತ್ತಿರುವ ಗುತ್ತಿಗೆದಾರನ ಕಣ್ಣು ಬಿತ್ತು. ಇದರಿಂದ ಗುತ್ತಿಗೆದಾರ ತನ್ನ ಕಾಮಗಾರಿಗಾಗಿ ಬೇಕಾದ ನೀರನ್ನು ಎಲ್ಲಿಂದಲೋ ಏಕೆ ತರುವುದು ಹೇಗೂ ಕೆರೆಯಲ್ಲಿ ನೀರಿದೆ ಅದನ್ನೇ ಬಳಸಿಕೊಳ್ಳಬಹುದೆಂದು ತಿಳಿಸಿ ತನ್ನ ಟ್ಯಾಂಕರ್ ಚಾಲಕನಿಗೆ ನೀರುತುಂಬಿಕೊಂಡು ಬರುವಂತೆ ಕಳುಹಿಸಿದ್ದಾನೆ.

      ಗುರುವಾರ ಇದನ್ನು ಪ್ರಶ್ನಿಸಿದ ಕೆಲವು ರೈತರು ನೀರು ತುಂಬಿಕೊಳ್ಳದಂತೆ ಹೇಳಿ ಕಳುಹಿಸಿದರು ಆದರೆ ಮತ್ತೆ ಅದೇ ಕೆಲಸಕ್ಕೆ ಬಂದಾಗ ಮತ್ತೆ ರೈತರುಗಳು ಎಚ್ಚರಿಸಿ ಕಳುಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap