ತುಮಕೂರು ; ಹಲ್ಲೆ ಪ್ರಕರಣ ; ನಗರದಲ್ಲಿ ಪೊಲೀಸ್ ಸರ್ಪಗಾವಲು!!

 ತುಮಕೂರು :

     ನಗರದ ಗುಬ್ಬಿಗೇಟ್ ಸಮೀಪ ಭಜರಂಗದಳದ ಕಾರ್ಯಕರ್ತ ಸೇರಿ ಇಬ್ಬರು ವ್ಯಕ್ತಿಗಳ ಮೇಲೆ ಏಕಾಏಕಿ ಗುಂಪುಗೂಡಿ ಗಲಾಟೆ ಮಾಡಿ ಹಲ್ಲೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಾಪುರವಾಡ್ ತಿಳಿಸಿದ್ದಾರೆ.

      ಘಟನೆ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ಕಲಂ 143, 147, 148, 323, 324, 341, 307, 504, 149 ರೀತ್ಯಾ ಪ್ರಕರಣ ದಾಖಲಿಸಿದ್ದು, ಉಳಿಕೆ ಆರೋಪಿಗಳ ಸೆರೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಪ್ರಕರಣತನಿಖಾ ಹಂತದಲ್ಲಿರುವುದರಿಂದ ಆರೋಪಿಗಳ ಹೆಸರನ್ನು ಬಹಿರಂಗ ಪಡಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

      ವ್ಹೀಲಿಂಗ್ ಪ್ರಶ್ನಿಸಿದಕ್ಕೆ ಸಂಭವಿಸಿತೆನ್ನಲಾದ ಈ ಹಲ್ಲೆ ಘಟನೆ ಹಿನ್ನೆಲೆಯಲ್ಲಿ ವ್ಹೀಲಿಂಗ್ ನಿಯಂತ್ರಣಕ್ಕೂ ಪೊಲೀಸರು ಮುಂದಾಗಿದ್ದು, ನಗರದ ಹೊರವಲಯದ ರಿಂಗ್ ರಸ್ತೆ, ನಗರದ ರಸ್ತೆಗಳಲ್ಲಿ ವೀಲ್ಹಿಂಗ್ ಮಾಡುತ್ತಿರುವವರಿಂದ ಉಂಟಾಗುತ್ತಿರುವ ಸಮಸ್ಯೆ ನಿಯಂತ್ರಣಕ್ಕೆ ಪ್ರತ್ಯೇಕ ತಂಡ ರಚನೆ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

      ಪೊಲೀಸ್ ಬಂದೋಬಸ್ತ್: ಹಲ್ಲೆ ಘಟನೆ ಯಾವುದೇ ಸಂಘರ್ಷಕ್ಕೆ ಆಸ್ಪದ ಮಾಡಿಕೊಡಬಾರದೆಂದು ತುಮಕೂರು ನಗರದಲ್ಲಿ ಪೊಲೀಸರು ಎಚ್ಚರಿಕೆ ವಹಿಸಿದ್ದು, ನಗರದ ಟೌನ್ ಹಾಲ್, ಬಸ್‍ನಿಲ್ದಾಣ, ಚರ್ಚ್, ಪ್ರಾರ್ಥನಾ ಮಂದಿರಗಳು, ದೇವಸ್ಥಾನ ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು, ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಜರಂಗದಳ ಜಿಲ್ಲಾ ಸಂಚಾಲಕ ಮಂಜುಭಾರ್ಗವ್ ಹಾಗೂ ಕಾರ್ಯಕರ್ತ ಕಿರಣ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ.

ಘಟನೆ ಖಂಡಿಸಿ ನಾಳೆ ಬಂದ್‍ಗೆ ಕರೆ

      ಗುಬ್ಬಿಗೇಟ್‍ನಲ್ಲಿ ಮಂಗಳವಾರ ಸಂಜೆ ಜರುಗಿದ ಹಲ್ಲೆ ಘಟನೆ ಖಂಡಿಸಿ ವಿಶ್ವಹಿಂದೂಪರಿಷತ್, ಭಜರಂಗದಳ ಅ.22ರಂದು ತುಮಕೂರು ನಗರ ಬಂದ್‍ಗೆ ಕರೆ ನೀಡಿದ್ದು, ವರ್ತಕರು ಎಲ್ಲಾ ವಾಣಿಜ್ಯ ವಹಿವಾಟುಗಳನ್ನು ಸಂಪೂರ್ಣ ಬಂದ್ ಮಾಡಿ ಸಹಕರಿಸಬೇಕು. ತಪ್ಪಿತಸ್ಥರ ಮೇಲೆ ಕಠಿಣಕ್ರಮಜರುಗಿಸಬೇಕೆಂದು ವಿಶ್ವಹಿಂದೂಪರಿಷತ್ ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸ್ ಮನವಿ ಮಾಡಿದ್ದಾರೆ.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link