ಕುಣಿಗಲ್
ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ವಿದ್ಯುತ್ ಅವಘಡ ತಪ್ಪಿಸಲು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ ಧೋರಣೆಯೇ ಕಾರಣ ಎಂಬುವುದಕ್ಕೆ ಕುಣಿಗಲ್ ಪಟ್ಟಣದ ಹೃದಯ ಭಾಗದಲ್ಲಿರುವ ಈ ವಿದ್ಯುತ್ ಪರಿವರ್ತಕವೂ ಒಂದು ಕೈಗನ್ನಡಿಯಾಗಿದೆ. ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದ ಸಮೀಪ ಮದ್ದೂರು ರಸ್ತೆಯ ಎನ್.ಟಿ.ಜಿ.ಎಂ.ಎಸ್. ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂಭಾಗ ಇರುವ ಈ ವಿದ್ಯುತ್ ಪರಿವರ್ತಕ ಇದೀಗ ಮೃತ್ಯು ಆಹ್ವಾನಕ್ಕೆ ಸಜ್ಜಾಗಿದೆ.
ಇದೇ ಸ್ಥಳದಲ್ಲಿ ಕೆಲ ತಿಂಗಳಿಂದೆ ಬೆಲೆ ಬಾಳುವ ಸೀಮೆ ಹಸು ಮೆಯಲು ಹೋಗಿ ಮೃತಪಟ್ಟ ಘಟನೆ ಇನ್ನೂ ಹಸಿರಾಗಿರುವಾಗಲೇ ಕೈಗೆಟಕುವ ಸ್ಥಿತಿಯಲ್ಲಿರುವ ವಿದ್ಯುತ್ ಪರಿವರ್ತಕದ ಕೆಳಗೆ ಮತ್ತು ಸುತ್ತ ಮುತ್ತ ಹಸಿರು ಗಿಡಗಳು ಬೆಳೆದು ಪೊದೆಯಾಗಿ ನಿರ್ಮಾಣವಾಗಿದ್ದು ಮಳೆ ಬಂದಾಗ ನೆಲದಲ್ಲಿ ಗ್ರೌಂಡ್ ಆಗುತ್ತಿರುವುದು ಮತ್ತಷ್ಟು ಭಯಬೀತಿಯನ್ನು ನಾಗರಿಕರಿಗೆ ಉಂಟುಮಾಡಿದೆ. ಅಲ್ಲದೆ ಮುಂಜಾನೆ ಚಿಂದಿ ಆಯ್ದುಕೊಳ್ಳುವ ಮಕ್ಕಳು ಸಹ ಇದರ ಕೆಳಗೆ ಬಿದ್ದಿರುವ ಬಾಟಲ್, ಪ್ಲಾಸ್ಟೀಕ್ ಆಯ್ದುಕೊಳ್ಳಲು ಹೋಗುತ್ತಿದ್ದು ಮುಂದೊಂದು ದಿನ ಹೆಚ್ಚಿನ ಅನಾಹುತ ಆಗುವುದಕ್ಕೂ ಮೊದಲು ಅಧಿಕಾರಿಗಳು ಜಾಗೃತರಾಗಬೇಕಿದೆ.
ಪಕ್ಕದಲ್ಲಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಇದ್ದು ನಿತ್ಯ ಮಕ್ಕಳು ಸಂಚರಿಸುವ ಸ್ಥಳವಾಗಿದೆ ಅಲ್ಲದೆ ವಿದ್ಯುತ್ ಪರಿವರ್ತಕದ ಪಕ್ಕದಲ್ಲಿಯೇ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಆಟೋ ನಿಲ್ದಾಣವು ಇದ್ದು ನಿತ್ಯ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳು, ರೈತರು ಸೇರಿದಂತೆ ಸಾವಿರಾರು ಜನ ಸಂಚರಿಸುವ ತಾಣವಾಗಿ ಮಾರ್ಪಟ್ಟಿದೆ ಇಂತಹ ಅತಿ ಸೂಕ್ಷ್ಮ ಪ್ರದೇಶದಲ್ಲಿರುವ ವಿದ್ಯುತ್ ಪರಿವರ್ತಕದ ಸುತ್ತ ಯಾವುದೇ ತಂತಿ ಬೇಲಿಯಾಗಲಿ ಅಥವಾ ಕಾಂಪೌಡ್ ಆಗಲಿ ನಿರ್ಮಿಸದಿ ರುವುದು ನಾಗರಿಕರ ಆಕ್ರೋಶಕ್ಕೆ ಎಡೆಮಾಡಿದ್ದು ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಈ ಅವ್ಯವಸ್ಥೆಯನ್ನ ಸರಿಪಡಿಸ ಬೇಕೆಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
