ಪ್ರಧಾನಿ ಅವಹೇಳನ : ಆರೋಪಿಯ ಬಂಧನ

ತಿಪಟೂರು    ನಗರದ ಗಾಂಧಿನಗರ ನಿವಾಸಿ ಅಮ್ಜದ್ ಖಾನ್ ಎಂಬಾತ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಮುಸಲ್ಮಾನರ ತಂಟೆಗೆ ಬಂದರೆ ಹಿಂದೂಗಳನ್ನು ಉಳಿಸುವುದಿಲ್ಲ. ಧೈರ್ಯ, ತಾಕತ್ತಿದ್ದರೆ ನೇರವಾಗಿ ಬನ್ನಿ. ಮುಸಲ್ಮಾನರನ್ನು ಏನೆಂದು ತಿಳಿದಿದ್ದಿರಾ. ನಾವು ಏನು ಬೇಕಾದರೂ ಮಾಡಲು ಸಿದ್ಧ. ನಿಮ್ಮ ನರೇಂದ್ರಮೋದಿ ಆಗಲಿ ಅಥವಾ ಆರ್‍ಎಸ್‍ಎಸ್ ಆಗಲಿ ಏನೂ ಮಾಡಲು ಸಾಧ್ಯವಿಲ್ಲ.

   ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಮುಸಲ್ಮಾನರ ಪಕ್ಷ ಕಟ್ಟುತ್ತೇವೆ. ಆಗ ಏನು ಮಾಡುತ್ತಿರಾ.ಈ ವಿಡಿಯೊವನ್ನು ಆರ್.ಎಸ್.ಎಸ್ ಹಿಂದೂ ಸಭಾದವರಿಗೆ ತಲುಪುವವರೆಗೂ ಹಂಚಿ. ಕರ್ನಾಟಕದ ಮುಸಲ್ಮಾನರು ಒಬ್ಬೊಬ್ಬರು 10 ಜನರನ್ನು ಕಡಿದು ಹಾಕುತ್ತಾರೆ. ನನ್ನ ಏನು ಮಾಡಲು ಸಾಧ್ಯವಿಲ್ಲಾ. ಸುಮ್ಮನೇ ಕೆಣಕಬೇಡಿ, ಯಾರೂ ಉಳಿಯುವುದಿಲ್ಲ ಎನ್ನುವ ಮಾತುಗಳು ವಿಡಿಯೊದಲ್ಲಿ ಇವೆ.ಅಮ್ಜದ್ ಖಾನ್ ಹಣ್ಣಿನ ವ್ಯಾಪಾರ ಮಾಡಿಕೊಂಡಿರುವ ಬಗ್ಗೆ ಮಾಹಿತಿದೊರೆತಿದೆ.

   ಯಾವಾಗ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತೊ ತಕ್ಷಣವೇ ಎಚ್ಚೆತ್ತ ಡಿವೈಎಸ್ಪಿ ಕಲ್ಯಾಣ್ ಕುಮಾರ್ ನೇತೃತ್ವದ ತಂಡ ಈತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ತುಮಕೂರಿಗೆ ಕರೆದೊಯ್ಯಲಾಗಿದೆ.ಈ ರೀತಿ ದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯಾರೇ ಆಗಲಿ ಬಂಧಿಸಿ ಸೂಕ್ತ ಶಿಕ್ಷೆ ನೀಡಲಿ ಎಂಬುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap