ಹರಪನಹಳ್ಳಿ
ಮೇಯುತ್ತಲೇ 12 ಕುರಿಗಳು ಸಾವನ್ನಪ್ಪಿದ ಘಟನೆ ತಾಲೂಕಿನ ಅರಸನಾಳು ಮತ್ತು ಕಲ್ಲಹಳ್ಳಿ ಗ್ರಾಮದ ನಡುವಿನ ಜಮೀನಿನಲ್ಲಿ ಮಂಗಳವಾರ ಸಂಜೆ ಜರುಗಿದೆ.
ಹೊಂಬಳಗಟ್ಟಿ ಗೋವಿಂಪ್ಪನವರ 9 ಕುರಿಗಳು ಹಾಗೂ ಬಾಪೂಜಿ ನಗರ ತಾಂಡದ ಶೇಖರ್ ನಾಯ್ಕ್ಗೆ ಸೇರಿದ 3 ಕುರಿಗಳು ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣ ತಿಳಿದಿರುವುದಿಲ್ಲ. ಪಶು ಸಂಗೋಪನಾ ವೈದ್ಯಾಧಿಕಾರಿ ಶಿವಕುಮಾರ್ ಪರಿಶೀಲನೆ ನಡೆಸಿ ಹೆಚ್ಚಿನ ಮಾಹಿತಿಗೆ ಜಿಲ್ಲಾಸ್ಪತ್ರೆಗೆ ಕುರಿಗಳ ದೇಹದ ಕೆಲಬಾಗಗಳನ್ನು ಪರೀಕ್ಷೆಗೆ ಕಳಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದಿಲ್ಲ ಪರೀಕ್ಷೆಯ ನಂತರ ಕಾರಣ ಅರಿತು ಮುಂದಿನ ಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ