ಆಕಸ್ಮಿಕ ಬೆಂಕಿಯಿಂದ ಹುಲ್ಲು ಭಸ್ಮ

ಮಿಡಿಗೇಶಿ

     ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವರಗಲ್ಲು ಗ್ರಾಮದ ಭಾಗ್ಯಮ್ಮ ಎನ್ನುವ ಮಹಿಳೆಯು ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ನಾಲ್ಕು ಲೋಡು ಕಡ್ಲೆಬಳ್ಳಿ, ಭತ್ತದ ಹುಲ್ಲು, ಹುರುಳಿ, ಅಲಸಂದೆ, ಜೋಳದ ಸಪ್ಪೆ ಮುಂತಾದ ಹುಲ್ಲನ್ನು 20 ಸಾವಿರ ರೂ. ಗಳಿಗೆ ಖರೀದಿಸಿ ತಂದು, ಊರ ಹೊರವಲಯದಲ್ಲಿ ಅನಾಥವಾಗಿರುವ ಸರ್ಕಾರಿ ಕಟ್ಟಡದಲ್ಲಿ ಸಂಗ್ರಹಿಸಿಟ್ಟಿದ್ದರು. ಸದರಿ ಹುಲ್ಲಿಗೆ ಮೇ 23 ರಂದು ಬೆಂಕಿ ಬಿದ್ದಿದ್ದು ಹುಲ್ಲು ಸಂಪೂರ್ಣ ಸುಟ್ಟು ಹೋಗಿದೆ. ಬೆಂಕಿ ಅವಘಡದ ಸುದ್ದಿ ತಿಳಿದು ಮಧುಗಿರಿ ಪಟ್ಟಣದಿಂದ ಅಗ್ನಿ ಶಾಮಕದಳದ ಠಾಣಾಧಿಕಾರಿ ಅಣ್ಣಪ್ಪ ಗದಗಿ ಬಂದು ಬೆಂಕಿಯನ್ನು ನಂದಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಿರುತ್ತಾರೆ

        ಸಂತ್ರಸ್ತ ಮಹಿಳೆ ಭಾಗ್ಯಮ್ಮಳೆ ಸಂಸಾರದ ಜವಾಬ್ದಾರಿ ಹೊತ್ತಿದ್ದು, ಜೀವನ ನಿರ್ವಹಣೆಗೆ ವ್ಯವಸಾಯದ ಜೊತೆಗೆ ಹಸುಗಳನ್ನು ಸಾಕಿಕೊಂಡು ಡೈರಿಗೆ ಹಾಲು ಹಾಕುತ್ತಿದ್ದರು. ಸಂಬಂಧಿಸಿದ ತಾಲ್ಲೂಕು ಆಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳು ನೊಂದ ಮಹಿಳೆಗೆ ಪರಿಹಾರ ಕೊಡಿಸುವಂತೆ ರೈತರು ಮನವಿ ಮಾಡಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link