ಎರಡನೇ ಬಾರಿಯು ಕೊಚ್ಚಿಹೋದ ರಸ್ತೆ : ಗ್ರಾಮಸ್ಥರ ಆಕ್ರೋಶ

ಹರಿಹರ:

    ಕಳೆದ ಎರಡು ದಿನಗಳಿಂದ ಹರಿಹರ ತಾಲೂಕಿನಲ್ಲಿ ಉತ್ತಮ ಮಳೆಯಾದ ಹಿನ್ನಲೆ ಎರಡು ಗ್ರಾಮಗಳ ಸಂಪರ್ಕ ಸೇತುವೆ ಕಡಿತಗೊಂಡಿದ್ದು ಸರ್ವಾಜನಿಕರಿಗೆ ಹಾಗೂ ರೈತರಿಗೆ ಜಮೀನುಗಳಿಗೆ ತೆರಳುವ ರಸ್ತೆ ನೀರಿನಿಂದ ಆವೃತವಾಗಿದೆ.

    ಹರಿಹರ ತಾಲ್ಲೂಕಿನ ರಾಮತೀರ್ಥ ಹಾಗೂ ಬೆಳ್ಳೋಡಿ ಗ್ರಾಮಗಳ ನಡುವಿನ ಸೇತುವೆಯ ರಸ್ತೆ ಅಧಿಕ ಮಳೆಯಿಂದ ಕೊಚ್ಚಿ ಹೋಗಿದೆ. ನಿನ್ನೆಯಿಂದ ರಬಸವಾಗಿ ಹರಿಯುತ್ತಿರುವ ಹಳ್ಳದ ನೀರು ರಸ್ತೆ ಹಾಗೂ ಕಬ್ಬಿಣದ ತಡಗೋಡೆಯನ್ನು ಕಿತ್ತು ಹೋಗಿವೆ. ಕಳೆದ ವರ್ಷವೂ ಇದೇ ಸನಸ್ಯೆ ನಿರ್ಮಾಣವಾಗಿತ್ತು. ಸೇತುವೆಯ ಸಂಪರ್ಕ ರಸ್ತೆಯು ಕಳೆದಬಾರಿ ಅಧಿಕ ಮಳೆಯ ನೀರಿನ ಹರಿವಿನಿಂದ ರಸ್ತೆ ಕೊಚ್ಚಿ ಹೋಗಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ, ಕೂಡಲೇ ರಸ್ತೆ ನಿರ್ಮಾಣದ ಕಾಮಗಾರಿ ಮಾಡುವಂತೆ ಆದೇಶಿಸಿ ಗುತ್ತಿಗೆದಾರನಿಗೆ ಕೆಲಸ ನೀಡಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದ ಈ ವರ್ಷವು ರಸ್ತೆ ಮತ್ತೆ ಕೊಚ್ಚಿಹೋಗಿದೆ, ಈ ಬಾರಿಯೂ ಗುತ್ತಿಗೆದಾರರಿಗೆ ಆದಾಯ ಬರುವ ನಿರೀಕ್ಷೆ ಇದೆ.

    ಸೂಳೆಕೆರೆ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಹಾಗು ರಸ್ತೆಯಮೇಲೆ ನೀರಿನ ಮಟ್ಟ ಹೆಚ್ಚಾದ ಹಿನ್ನಲೆ ನೀರಿನ ರಭಸಕ್ಕೆ ಕೊಚ್ಚಿಹೋದ ರಸ್ತೆಯನ್ನು ಅಧಿಕಾರಿಗಳು ವೀಕ್ಷಿಸಲಿದ್ದಾರೆ. ಈ ಹಿಂದೆ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದಾರೆ ಎಂದು ಗ್ರಾಮಸ್ಥರ ಆಕ್ರೋಶ ಹೊರಹಾಕುತ್ತಿದ್ದಾರೆ.ರಾಜಕಾರಣಿಗಳು ಮತ್ತು ಅಧಿಕಾರಿಗಳು ಈ ಬಾರಿಯ ಕಾಮಗಾರಿ ಎಷ್ಟು ಅನುದಾನ ಬಿಡುಗಡೆ ಮಾಡುತ್ತಾರೆ, ಎಷ್ಟು ಬಿಲ್ ಮಾಡಿಕೊಳ್ಳುತ್ತಾರೆ, ಎಷ್ಟು ಕಳಪೆ ಆಗುತ್ತದೆ ಎಂದು ಕಾದನೋಡಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link