ನಾಡಿಗೆ ಹಾಗೂ ದೇಶದ ಸೇವೆಗೆ ಬದ್ಧರಾಗಿರಬೇಕು

ಹರಪನಹಳ್ಳಿ

       ಕರ್ನಾಟಕದ ಏಕೀಕರಣದಲ್ಲಿ ನಾಡಿನ ಮಹನೀಯರ ಕೊಡುಗೆ ಅಪಾರವಾದದ್ದು. ಕನ್ನಡ ರಾಜ್ಯೋತ್ಸವ ಆಚರಿಸಿದರಷ್ಟೇ ಸಾಲದು ನಾಡಿಗೆ ಹಾಗೂ ದೇಶದ ಸೇವೆಗೆ ಬದ್ಧರಾಗಿರಬೇಕು ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.

       ಪಟ್ಟಣದಲ್ಲಿ ಗುರುವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

         ಭಾಷಾವಾರು ಪ್ರಾಂತ್ಯಗಳು ಏಕೀಕರಣಗೊಂಡು ನಮ್ಮ ರಾಜ್ಯ ಅಸ್ತಿತ್ವಕ್ಕೆ ಬಂತು. ಕರ್ನಾಟಕ ಸುಂದರ, ನದಿಗಳ ಬೀಡು ಎನಿಸಿಕೊಂಡಿದೆ. ಕರ್ನಾಟಕ ದೇಶದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯವೆನ್ನಿಸಿಕೊಂಡಿದೆ. ಆರ್ಥಿಕ, ಶೈಕ್ಷಣಿಕ ಸೇರಿದಂತೆ ವಿವಿಧ ರಂಗದಲ್ಲಿ ಕನ್ನಡನಾಡು ಖ್ಯಾತಿ ಗಳಿಸಿದೆ. ನಾಡು-ನುಡಿ ಎಲ್ಲರಲ್ಲೂ ಕಾಳಜಿ ಮೂಡಬೇಕಿದೆ ಎಂದರು.

        ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್ ಮಾತನಾಡಿ, ಬೇರೆ ಭಾಷೆಗಳ ಪ್ರಭಾವ ಕನ್ನಡದ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಹೀಗಾಗಿ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ಆಗುತ್ತಿದೆ. ಹೀಗಾಗಿ ಸರ್ಕಾರಗಳು ಕನ್ನಡ ಭಾಷಾ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ. ಕನ್ನಡ ಭಾಷೆ ಉಳಿವಿಗೆ ಎಲ್ಲರೂ ಪಣತೊಡಗಬೇಕು ಎಂದರು.

       ಉಪ ವಿಭಾಗಾಧಿಕಾರಿ ರಾಹುಲ್ ಪಾಂಡ್ವೆ ಉದ್ಘಾಟಿಸಿದರು. ಕಸಾಪ ಅಧ್ಯಕ್ಷರು ಕೆ.ರಾಮನಮಲಿ, ತಹಶೀಲ್ದಾರ ಡಾ.ಎನ್.ಮಧು ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸನ್ಮಾನಿಸಲಾಯಿತು.

       ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುನಾಥ್ ಉತ್ತಂಗಿ, ಸುವರ್ಣ ಆರುಂಡಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜ್ಯಾನಾಯ್ಕ, ಪುರಸಭೆ ಉಪಾಧ್ಯಕ್ಷ ಕೆ.ಸತ್ಯನಾರಾಯಣ, ಸದಸ್ಯರಾದ ಅರುಣ ಪೂಜಾರ, ವೆಂಕಟೇಶ್, ಜಯಮ್ಮ, ತಾಪಂ ಪ್ರಭಾರಿ ಇಒ ಎಲ್.ತಿಮ್ಮಾನಾಯ್ಕ, ಪುರಸಭೆ ಮುಖ್ಯಾಧಿಕಾರಿ ಬಿ.ಆರ್.ನಾಗರಾಜನಾಯ್ಕ, ಬಿಇಒ ಬಿ.ಸಿ.ಸಿದ್ದಪ್ಪ ಇವರೂ ಇದ್ದರು. ಹೇಮಣ್ಣ ಮೋರಗೆರೆ ನಿರೂಪಿಸಿದರು. ಬಿ.ಜಯಮಾಲತೇಶ್ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link