ಪಾವಗಡ :
ನಾಗಲಮಡಿಕೆಗ್ರಾಮದ ವಿದ್ಯತ್ ಕೇಂದ್ರದಿಮದ ಅರಕ್ಯಾತನಹಳ್ಳಿ ಬಳಿಇರುವ 220 ಕೇ.ವಿ. ವಿದ್ಯತ್ ಕೇಂದ್ರಕ್ಕೆ ವಿದ್ಯತ್ ಸರಬರಾಜು ಮಾಡಲು ಜಮೀನಿನ ಮಾಲೀಕರ ಗಮನಕ್ಕೆ ತರದೇ ಟವರ್ ಕಾಮಗಾರಿಯನ್ನು ನಡೆಸುತ್ತಿರುವ ಏಟ್ರೀಯಾ ಕಂನಿ ವಿರುದ್ದ ರೈತ ಮತ್ತು ಹಸಿರುಸೇನೇ ಸಂಘದ ವತಿಯಿಂದ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಜರುಗಿದೆ.
ರೈತ ಮತ್ತು ಹಸಿರು ಸೇನೇ ಸಂಘದ ತಾ. ಅಧ್ಯಕ್ಷ ಪೂಜಾರಪ್ಪ ಮಾತನಾಡಿ, 2015ರಲ್ಲಿ ಇದೇ ತರಹ ರೈತರಿಗೆ ಹಲವು ಕಂಪನಿಗಳು ವಂಚಿಸಿದ್ದವು ಕೊನೆಗೆ 6 ಲಕ್ಷದವರೆಗೂ ರೈತರಿಗೆ ಪರಿಹಾರ ಕೊಡಿಸಲಾಗಿದೆ ಬದಲಾದ ಕಾಲಮಾನದಲ್ಲಿ ಇಂದು ಈ ರೈತರ ಮೇಲೆ ಕೆಪಿಟಿಸಿಎಲ್ ಗುತ್ತಿಗೆದಾರರು ದೌರ್ಜನ್ಯ ಮಾಡುತ್ತಿದ್ದು ಕೂಡಲೇ ಕಾಮಗಾರಿ ನಿಲ್ಲಿಸಿ ನಡೆದ ಘಟನೆಗೆ ರೈತರಿಗೆ ಕ್ಷಮೇ ಕೇಳಬೇಕು ಒಂದು ಟವರ್ ನಿರ್ಮಾಣಕ್ಕೆ 10 ಲಕ್ಷ ಪರಿಹಾರ ನೀಡುವವರೆಗೂ ಕಾಮಗಾರಿ ನಡೆಸಭಾರದು ಒಂದು ವೇಳೆ ನಡೆಸಿದರೆ ರೈತ ಸಂಘ ನೊಂದ ಮಹಿಳೆಯ ಪರವಾಗಿ ನಿಂತು ಉಗ್ರಹೋರಾಟ ನಡೆಸಲಾಗುತ್ತದೆ ಎಂದರು.
ಜಮೀನಿನ ಮಾಲೀಕರ ಪುತ್ರಿ ಶ್ರೀದೇವಿ ಮಾತನಾಡಿ, ನಮ್ಮ ತಾಯಿಯ ಹೆಸರಿನಲ್ಲಿ ಅರೆಕ್ಯಾತನ ಹಳ್ಳಿ ಗ್ರಾಮದ ಬಳಿಯ ಸರ್ವೆ ನಂಬರ್ 148ರಲ್ಲಿ 16 ಎಕರೆ ಜಮೀನಿದ್ದು, ಕಳೆದ ಪೆಭ್ರವರಿ ತಿಂಗಳಲ್ಲಿ ಕೆ.ಪಿ.ಟಿ.ಸಿ.ಎಲ್. ವತಿಯಿಂದ ವಿದ್ಯುತ್ ಪೂರೈಕೆಗೆ ಟವರ್ ಕಾಮಗಾರಿ ನಡೆಸಬಾರದು ಎಂದು ತುಮಕೂರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ, ಆದರೆ ಗುತ್ತಿಗೆ ಪಡೆದುಕೊಂಡಿರುವ ಏಟ್ರೀಯಾ ಕಂಪನಿಯ ಸಿಬ್ಬಂದಿ ನಮ್ಮ ಮಾತಿಗೆ ಬೆಲೆ ಕೊಡದೇ ದೌರ್ಜನ್ಯವಾಗಿ ನಮ್ಮ ಜಮೀನಿನಲ್ಲಿ ಕಾಮಗಾರಿ ಮುಂದುವರೆಸಿದ್ದಾರೆ, ಅದ್ದರಿಂದ ಈ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೇ ಹೂಡತ್ತೇವೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಕಂಪನಿಯ ಸಿಬ್ಬಂದಿಯಾದ ಯಸೋದರ ಎನ್ನುವರು ಆಗಮಿಸಿ ಕಾಂಗಾರಿಯನ್ನು ನಿಲ್ಲಿಸುತ್ತೀದ್ದೇವೆ ಎಂದು ಮನವರಿಕೆ ಮಾಡಿಕೊಟ್ಟರು. ಸ್ಥಳಕ್ಕೆ ಗ್ರಾಮಲೆಕ್ಕಿಗ ಷಣ್ಮೂಖ ಹಾಜರಾಗಿ ಘಟನೆಯ ವಿವಿರವನ್ನು ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮಾನವ ಹಕ್ಕುಗಳ ಮತ್ತು ಭ್ರಷ್ಠಚಾರ ನಿರ್ಮಲನಾ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ದುಗ್ಗಪ್ಪ, ಮಹಿಳಾ ಹೋರಾಟಗಾರ್ತಿ ಅನ್ನಪೂರ್ಣಮ್ಮ, ಜಮೀನಿನ ಮಾಲೀಕರ ಪುತ್ರಿಯರಾದ ಪೂರ್ಣಿಮಾ, ನಂದಿನಿ, ವನಿತಾ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
