ಹುಳಿಯಾರು : ಜೆಡಿಎಸ್‍ನಿಂದ ಕಾರ್ಯಕರ್ತರ ಅಭ್ಯರ್ಥಿ ಕಣಕ್ಕೆ

 ಹುಳಿಯಾರು : 

      ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಕಾರ್ಯಕರ್ತರು ಸೂಚಿಸಿದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದಾಗಿ ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ತಿಳಿಸಿದರು.

      ಹುಳಿಯಾರಿನ 16 ವಾರ್ಡ್‍ಗಳ ಅಭ್ಯರ್ಥಿಗಳಿಗೆ ಜೆಡಿಎಸ್ ಬಿ ಫಾರಂ ವಿತರಿಸಿ ಅವರು ಮಾತನಾಡಿ ಮತದಾರರೂ ಸ್ಥಳೀಯರು, ಚುನಾವಣೆಗೆ ಓಡಾಡುವವರೂ ಸ್ಥಳೀಯರು. ಹಾಗಾಗಿ ಸ್ಥಳೀಯ ಮನ್ನಣೆ ನೀಡಿದಾಗ ಮಾತ್ರ ಗೆಲುವು ಸುಲಭಸಾಧ್ಯ. ಈ ನಿಟ್ಟಿನಲ್ಲಿ ಒಂದೊಂದು ವಾರ್ಡ್‍ಗೂ ಮೂರ್ನಲ್ಕು ಮಂದಿ ಆಕಾಂಕ್ಷಿಗಳಿದ್ದರೂ ಸಹ ಮುಖಂಡರು ಮತ್ತು ಕಾರ್ಯಕರ್ತರು ಒಮ್ಮತದ ಅಭ್ಯರ್ಥಿಗಳನ್ನು ಜ್ಯಾತ್ಯಾತೀತ ನೆಲೆಗಟ್ಟಿನಲ್ಲಿ ಕಣಕ್ಕಿಳಿಸುತ್ತಿರುವುದಾಗಿ ತಿಳಿಸಿದರು.

      ಈ ಸಂದರ್ಭದಲ್ಲಿ ತಾಪಂ ಸದಸ್ಯ ಎಚ್.ಎನ್.ಕುಮಾರ್, ಯುವ ಜೆಡಿಎಸ್ ಅಧ್ಯಕ್ಷ ಗೌಡಿ, ಪಪಂ ಮಾಜಿ ಸದಸ್ಯರುಗಳಾದ ಪಟಾಕಿಶಿವಣ್ಣ, ಅಹಮದ್‍ಖಾನ್, ಮುಖಂಡರುಗಳಾದ ಜಲಾಲ್‍ಸಾಬ್, ಏಜಾಸ್, ಹಾರೂನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link