ಬರಗೂರು :
ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಗೋಣಿಹಳ್ಳಿ ಗ್ರಾಮದ 30 ವರ್ಷದ ಯುವಕನೋರ್ವ ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿರುವ ಘಟನೆ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ಜರುಗಿದೆ.
ಮೃತ ಯುವಕ ರವಿಕುಮಾರ್ ಗೋಣಿಹಳ್ಳಿ ಗ್ರಾಮ ವಾಸಿಯಾಗಿದ್ದು, ಈತನು ಅವಿವಾಹಿತರಾಗಿದ್ದರು. ಒಂದು ವಾರದಿಂದ ಮನೆಯಲ್ಲೇ ಜ್ವರ, ತಲೆನೋವು, ಸುಸ್ತು ಇತ್ಯಾದಿ ಕಾಯಿಲೆಯಿಂದ ನರಳುತ್ತಿದ್ದರು ಎನ್ನಲಾಗಿದೆ. ಆಸ್ಪತ್ರೆಗೆ ಹೋಗಿ, ಕೋವಿಡ್ ಟೆಸ್ಟ್ ಮಾಡಿಸಿ, ಪಾಸಿಟೀವ್ ಸೋಂಕು ತಗುಲಿದರೆ ನನ್ನನ್ನು ಜನರು ಅವಮಾನಿಸುತ್ತಾರೆ ಎಂಬ ಭೀತಿಯಿಂದ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಇದ್ದು ಮಾತ್ರೆಗಳನ್ನು ಸೇವಿಸುತ್ತಿದ್ದರು ಎನ್ನಲಾಗಿದೆ. ಬುಧವಾರ ಬೆಳಗ್ಗೆ ಉಸಿರಾಟದ ತೊಂದರೆಯಿಂದಾಗಿ ನರಳುತ್ತಿದ್ದುದರಿಂದ ಸಂಬಂಧಿಕರು ಯುವಕನನ್ನು ಶಿರಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಕೋವಿಡ್ ರ್ಯಾಂಡೆಮ್ ಟೆಸ್ಟ್ ಮಾಡಿದಾಗ ಯುವಕನಿಗೆ ಪಾಸಿಟೀವ್ ಬಂದಿರುವುದು ದೃಢವಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಯುವಕ ಬುಧವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.
ಕಿರಿಯ ಆರೋಗ್ಯ ಸಹಾಯಕ ಮನುಕಿರಣ್, ಪೋಲೀಸ್ ಪೇದೆ ಸಂಜುಕುಮಾರ್, ಹೋಮ್ ಗಾರ್ಡ್ ಶ್ರೀನಿವಾಸ್, ಪಿಡಿಓ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
