ವಿಶ್ಲೇಷಣೆ, ತನಿಖಾ ವರದಿಗಳು ಕಡಿಮೆಯಾಗುತ್ತಿವೆ

ತುಮಕೂರು:


   ಕಗ್ಗೆರೆಯಲ್ಲಿ ಪತ್ರಕರ್ತರ ಜಿಲ್ಲಾಕಾರ್ಯಾಗಾರ,ಸನ್ಮಾನ ಸಮಾರಂಭ

ಕುಣಿಗಲ್ ತಾಲೂಕಿನ ತಪೋಕ್ಷೇತ್ರ ಕಗ್ಗೆರೆಯಲ್ಲಿ ಶುಕ್ರವಾರ ಪತ್ರಕರ್ತ ರ ಜಿಲ್ಲಾ ಮಟ್ಟದ ಕಾರ್ಯಾಗಾರ ಹಾಗೂ ಹಿರಿಯ ಪತ್ರಕರ್ತ ರಿಗೆ ಸನ್ಮಾನ ಸಮಾರಂಭ ನೆರವೇರಿತು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತ ರ ಸಂಘದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ಕಗ್ಗೆರೆಯ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ. ಮಾಧುಸ್ವಾಮಿ ಅವರು ಮಾಧ್ಯಮ ವರದಿಗಳು ಇತ್ತೀಚೆಗೆ ಹೇಳಿಕೆ ಗಳು ಪ್ರತಿ ಹೇಳಿಕೆಗಳಿಗೆ ಸೀಮಿತವಾಗುತ್ತಿದ್ದು, ಹೇಳಿಕೆ ಯ ಹಿಂದಿನ ಉದ್ದೇಶ ದ ವಿಶ್ಲೇಷಣೆ , ಅದು ಸರಿಯೇ ತಪ್ಪೇ ಎಂದು ವಾಸ್ತವಂಶ ತನಿಖೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ಥಳೀಯ ಆವೃತ್ತಿ ಗಳು ಬಂದು ರಾಜ್ಯ ವ್ಯಾಪಿ ಸುದ್ದಿ ಗಳೇ ಪ್ರಕಟವಾಗದಂತಾಗಿದೆ.

ಪತ್ರಕರ್ತರು ವಸ್ತುನಿಷ್ಠ ವರದಿಗೆ ಒತ್ತು ನೀಡಬೇಕಿದೆ. ಮುದ್ರಣ ಮಾಧ್ಯಮ ಇಂದು ವಿಶ್ವಾಸಾರ್ಹತೆ ಉಳಿಸಿ ಕೊಂಡಿರುವುದು ಸಮಾಧಾನದ ಸಂಗತಿಯಾಗಿದೆ. ಪತ್ರಕರ್ತ ರು ಮಾಹಿತಿ ಯ ಕಣಜ ವಾಗಿರಬೇಕು. ಹೂರಣದ ರೀತಿಯ ಲ್ಲಿ ವರದಿಗಳು ಸಮಗ್ರತೆ ಯಿಂದ ಕೂಡಿರಬೇಕು ಎಂದು ಸಲಹೆ ನೀಡಿದರು.ಜಿಲ್ಲೆಯ ಎಲ್ಲಾ ಪತ್ರಕರ್ತ ರನ್ನು ಒಂದೆಡೆ ಸೇರಿಸಿ ಅವರಲ್ಲಿ ಅರಿವು ಹೆಚ್ಚಿಸುವ ಕಾರ್ಯನಿರತ ಪತ್ರಕರ್ತ ರ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕಗಳ ಕಾರ್ಯ ಶ್ಲಾಘನೀಯ ಎಂದರು.

ಶಾಸಕ ಡಾ.ಎಚ್.ಡಿ.ರಂಗನಾಥ್ ಕಾರ್ಯ ಕ್ರಮ ಉದ್ಘಾಟಿಸಿ ಪತ್ರಕರ್ತ ರು ಸಮಾಜದ ಓರೆ- ಕೋರೆಗಳನ್ನು ಪರಿಚಯಿಸುವ ಜೊತೆಗೆ ಜನಪ್ರತಿನಿಧಿಗಳು ತಪ್ಪು ತಿದ್ದಿಕೊಳ್ಳುವಂತೆ ಎಚ್ಚರಿಸುತ್ತಿದ್ದಾರೆ. ಪತ್ರಕರ್ತ ರ ಸಂಕಷ್ಟಕ್ಕೆ ಶಾಸಕನಾಗಿ ಸ್ಪಂದಿಸುವುದು ನನ್ನ ಜವಾಬ್ದಾರಿ ಯಾಗಿದ್ದು ಆರೋಗ್ಯ ವಿಮೆ ಮಾಡಿಸಿ ಕೊಡುವ ಜೊತೆಗೆ ಅರ್ಹರಿಗೆ ನಿವೇಶನ ಕಲ್ಪಿಸುವುದಾಗಿ ಭರವಸೆ ನೀಡಿದರು. ಒತ್ತಡ ದಲ್ಲಿ ರುವ ಪತ್ರಕರ್ತ ರು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.ಶಾಸಕ ಮಸಾಲೆ ಜಯರಾಂ ಮುಖ್ಯ ಅತಿಥಿಯಾಗಿ ಮಾತನಾಡಿ ತುರುವೇಕೆರೆ ತಾಲೂಕಿನ ಪತ್ರಿಕಾ ಭವನ ನಿರ್ಮಾಣ ಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಪಿಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ. ಕೃಷ್ಣಕುಮಾರ್ ಕುಣಿಗಲ್ ತಾಲೂಕಿನ ಲ್ಲಿ ಕಾರ್ಯಾಗಾರ ನಡೆಯುತ್ತಿರುವುದು ಶ್ಲಾಘನೀಯ ಎಂದರು.ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಪತ್ರಿಕಾ ರಂಗದಲ್ಲಿ ಕೆಲಸ ಮಾಡುವವರಿಗೆ ಬದ್ದತೆ ಮುಖ್ಯ. ಗಾಂಧೀಜಿ, ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪತ್ರಿಕಾರಂಗ ಮುನ್ನೆಡೆಯಬೇಕಿದೆ. ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರದ ಕಾಲ ಘಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಹಲವು ತಲ್ಲಣಗಳನ್ನು ಸೃಷ್ಟಿಸಿದೆ. 45ಜನ ಪತ್ರ ಕರ್ತರು ಕೊರೊನಾದಿಂದ ಮೃತಪಟ್ಟ ರು. ಅವರ ಕುಟುಂಬಗಳ ಸಂಕಷ್ಟಕ್ಕೆ ಸಂಘವು ಮಿಡಿಯುವ ಜೊತೆಗೆ ಸರಕಾರದಿಂದ 5 ಲಕ್ಷ ಪರಿಹಾರ ಕೊಡಿಸುವ ಕಾರ್ಯ ಮಾಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಸಂಘದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಸಂಘ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತರಾದ ಹಮೀದ್ ಪಾಳ್ಯ ತಿಪಟೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪತ್ರಕರ್ತರಾದವರು ಪ್ರತಿಯೊಂದನ್ನು ಪ್ರಶ್ನಿಸಿಯೇ, ವಿಮರ್ಶಿಸಿಯೇ ನೋಡಬೇಕು. ಭಾಷಾ ಬಳಕೆಯ ಅರಿವಿರಬೇಕು. ನಾವು ಕಾರ್ಯನಿರ್ವಹಿಸುವ ಜಿಲ್ಲೆ, ರಾಜ್ಯದ ಪರಿಚಯ, ಸಾಮಾನ್ಯ ಜ್ಞಾನ ಅತಿ ಅವಶ್ಯ ಎಂದು ತಿಳಿ ಹೇಳಿದರು.

ಐಎಫ್‍ಡಬ್ಲ್ಯೂಜೆ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಶಿವಾನಂದ್ ಅವರು ಅಧ್ಯಕ್ಷರಾದ ಮೇಲೆ ಸಂಘ ಪ್ರವರ್ದಮಾನಕ್ಕೆ ಬಂದಿದೆ, ಜಿಲ್ಲಾ ಸಂಘವೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಕರ್ತರಾದವರು ಹಮ್ಮು ಬಿಮ್ಮು ಬಿಟ್ಟು ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಜಿಲ್ಲಾ ಕಾರ್ಯಕಾರಿ ಸಮಿತಿ, ತಾಲೂಕು ಘಟಕಗಳು, ಸದಸ್ಯರ ಸಹಕಾರದೊಂದಿಗೆ ನಮ್ಮ ಅವಧಿಯಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ಫುಡ್‍ಕಿಟ್ ವಿತರಣೆ, ಕಾರ್ಯಾಗಾರ ಸೇರಿದಂತೆ ಅನೇಕ ರಚನಾತ್ಮಕ ಕಾರ್ಯಗಳನ್ನು ಮಾಡಿದ್ದು, ರಾಜ್ಯ ಸಂಘದಿಂದ ಮೆಚ್ಚುಗೆಗಳಿಸಿದೆ. ಜಿಲ್ಲಾ ಪತ್ರಿಕಾ ಭವನವನ್ನು ಸಂಘದ ಅಡಿಯಲ್ಲಿ ಮುನ್ನೆಡೆಸಲಾಗುತ್ತಿದೆ. ಪ್ರತೀ ತಾಲೂಕಿಗೊಂದು ಪತ್ರಿಕಾ ಭವನ ನಿರ್ಮಾಣವಾಗಲು, ಸಚಿವರು ಶಾಸಕರು ಸಹಕರಿಸಬೇಕು ಎಂದರು.

ಕುಣಿಗಲ್ ತಾಲೂಕು ಘಟಕದ ಅಧ್ಯಕ್ಷ ಕೆ.ಎ.ರವೀಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ದಾಸೋಹ ಸಮಿತಿ ನಿರ್ದೇಶಕ ನಿಟ್ಟೂರು ಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪ್ರಧಾನಕಾರ್ಯದರ್ಶಿ ಎನ್.ಡಿ.ರಂಗರಾಜು ಹಾಗೂ ಜಿಲ್ಲಾ ಉಪಾಧ್ಯಕ್ಷ ಸಿದ್ಧಲಿಂಗಸ್ವಾಮಿ ಸ್ವಾಗತಿಸಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನಾಗರಾಜು, ಜಿಲ್ಲಾ, ಪದಾಧಿಕಾರಿಗಳು, ನಿರ್ದೇಶಕರಾದ ಶ್ಯಾನಪ್ರಸನ್ನಮೂರ್ತಿ, ಸಿ.ರಂಗನಾಥ್,ಸಿ.ದೇವರಾಜು, ಮಲ್ಲಿಕಾರ್ಜುನದುಂಡ, ಬರಗೂರು ವಿರೂಪಾಕ್ಷ, ಸತೀಶ್ ಹಾರೋಗೆರೆ, ಎಲ್.ಯೋಗೇಶ್, ತಿಪಟೂರು ಕೃಷ್ಣ, ದಶರಥ. ರಂಗಧಾಮಯ್ಯ, ಸಿ.ಟಿ.ಎಸ್.ಗೋವಿಂದಪ್ಪ, ತಾಲೂಕು ಘಟಕದ ಎಂ.ಡಿ.ಮೋಹನ್, ಕೆ.ಎನ್.ಲೋಕೇಶ್, ಎನ್.ನರಸಿಂಹಪ್ರಸಾದ್, ಶ್ರೀನಿವಾಸ್, ಅಶೋಕ್, ರಾಮಚಂದ್ರಯ್ಯ, ಗುರುಚರಣ್‍ಸಿಂಗ್, ಕೆ.ಆರ್.ರಂಗನಾಥ್, ಆನಂದ್‍ಸಿಂಗ್, ದಲಿತ್‍ನಾರಾಯಣ್, ಶಂಕರ್, ಮಹಾದೇವಸ್ವಾಮಿ ಇತರರು ಉಪಸ್ಥಿತರಿದ್ದರು. ಭಾಗವಹಿಸಿದ ಪತ್ರಕರ್ತರಿಗೆ ಪ್ರಮಾಣ ಪತ್ರ, ಬ್ಯಾಗ್ ನೆನಪಿನ ಉಡುಗೊರೆಯಾಗಿ ನೀಡಲಾಯಿತು. ಪ್ರತಿಕಾ ಛಾಯಾಗ್ರಾಹಕ ಟಿ.ಎಚ್.ಸುರೇಶ್ ಸೇರಿ ಪ್ರತೀ ತಾಲೂಕಿನಿಂದ ಇಬ್ಬರು ಹಿರಿಯ ಪತ್ರಕರ್ತರಿಗೆ ಸನ್ಮಾನ ನೆರವೇರಿಸಲಾಯಿತು.

ಮೃತರಿಗೆ ಶ್ರದ್ಧಾಂಜಲಿ: ಇತ್ತೀಚೆಗೆ ಅಗಲಿದ ಸಂಘದ ಮಾಜಿ ಅಧ್ಯಕ್ಷ ಜಿ.ಇಂದ್ರಕುಮಾರ್, ನಿರ್ದೇಶಕ ಕುಮಾರ್, ಫಯಾಜ್ ಉಲ್ಲಾ, ನಾಗರಾಜು ಸೇರಿದಂತೆ ವಿವಿಧ ಮೃತ ಪತ್ರಕರ್ತರು, ನಟ ಪುನೀತ್‍ರಾಜ್‍ಕುಮಾರ್ ನಿಧನಕ್ಕೆ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕುಣಿಗಲ್‍ನ ಕಗ್ಗೆರೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರಸಂಘದ ಜಿಲ್ಲಾ ತಾಲೂಕು ಘಟಕದಿಂದ ನಡೆದ ಜಿಲ್ಲಾ ಮಟ್ಟದ ಪತ್ರಕರ್ತರ ಕಾರ್ಯಾಗಾರದ ಸಮಾರೋಪದಲ್ಲಿ ಸಚಿವ ಮಾಧುಸ್ವಾಮಿ ಅವರು ಜಿಲ್ಲೆಯ ಹಿರಿಯ ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರನ್ನು ಸನ್ಮಾನಿಸಿದರು. ಶಾಸಕ ಮಸಾಲೆ ಜಯರಾಂ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಡಿ.ಕೃಷ್ಣಕುಮಾರ್ ಕೆಡಯುಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು, ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ತಾಲೂಕು ಅಧ್ಯಕ್ಷ ರವೀಂದ್ರಕುಮಾರ್, ಹಿರಿಯ ಪತ್ರಕರ್ತ ಹಮೀದ್ ಪಾಳ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಡಿ.ರಂಗರಾಜು, ಸಿದ್ಧಲಿಂಗಸ್ವಾಮಿ ಇತರೆ ಪದಾಧಿಕಾರಿಗಳು ಪಾಲ್ಗೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link