ಕಲಬುರಗಿ:
ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ನಂತರ ಅದು ಸಕ್ಸಸ್ ಆದ ಖುಷಿಗೆ ಗ್ರೂಪ್ ಪೋಟೊ ತೆಗಸಿಕೊಂಡ ಟೀಮ್ ಫೋಟೋ ಇದೀಗ ವೈರಲ್ ಆಗಿದೆ.ಇಲ್ಲಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರೂಪ್ ಪೋಟೋ ತೆಗೆಸಿಕೊಳ್ಳಲಾಗಿತ್ತು.ಇದು ಒಂದು ಐತಿಹಾಸಿಕ ದಿನ ಎಂದು ಹೇಳಿ ಪೋಟೋ ತೆಗೆಸಿಕೊಂಡಿದ್ದರು ಅಕ್ರಮದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮತ್ತು ಅವರ ತಂಡ.
ಅಕ್ರಮದಲ್ಲಿ ಭಾಗಿಯಾಗಿದ್ದ ಜ್ಞಾನ ಜ್ಯೋತಿ ಶಾಲೆಯ ಮೇಲ್ವಿಚಾರಕರಿಗೆ ನಾಲ್ಕು ಸಾವಿರ ಹೆಚ್ಚಿಗೆ ಹಣ ನೀಡಿರುವ ಆರೋಪ ದಿವ್ಯಾ ಅವರ ಮೇಲಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ ಉಳಿದವರಿಗೆ ಸೇರಬೇಕಾಗಿದ್ದ ಪಾಲು ಸಂದಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೋಟೊ ತೆಗೆಸಿಕೊಂಡು ಸಂತಸ ಪಟ್ಟಿದ್ದರು ಎನ್ನಲಾಗಿದೆ.
ಈ ಫೋಟೋದಲ್ಲಿ ಸಿಐಡಿಯಿಂದ ಬಂಧಿತರಾಗಿರುವ ಸಿಪಿಐ ಆನಂದ್ ಮೇತ್ರಿ, ಇದೇ ಪ್ರಕರಣದಲ್ಲಿ ಅಮಾನತಾಗಿರು ಡಿವೈಎಸ್ಪಿ ಆರ್ ಆರ್ ಹೋಸಮನಿ, ಇನ್ಸ್ಪೆಕ್ಟರ್ ದೀಲಿಪ್ ಸಾಗಾರ್ ಕೂಡ ದಿವ್ಯಾ ಜತೆಗೆ ಪೋಟೊಗೆ ಪೋಸ್ ಕೊಟ್ಟಿದ್ದಾರೆ. ಈ ಅಕ್ರಮ ಪ್ರಕರಣದಲ್ಲಿ ಆರೋಪಿಯಾಗಿರುವ ಜ್ಞಾನ ಜ್ಯೋತಿ ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್ ಅವರನ್ನೂ ಪೋಟೋದಲ್ಲಿ ಕಾಣಬಹುದು. ಇದರ ಜತೆತೆ ಶಾಲೆಯ ಸಿಬ್ಬಂದಿ, ಹೋಮ್ ಗಾರ್ಡ್ ಗಳು ಫೋಟೋದಲ್ಲಿ ಇದ್ದಾರೆ.
ಯೂಕ್ರೇನ್ ಶಾಲೆ ಮೇಲೆ ರಷ್ಯಾ ಬಾಂಬ್: ಮಕ್ಕಳು ಸೇರಿ 60 ಜನ ಮೃತಪಟ್ಟಿರುವ ಶಂಕೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








