ಗ್ರಾಮ ಸಹಾಯಕರ ಸಂಘದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

ಬೆಂಗಳೂರು :

     1/2/1963 ರಿಂದ ಅನ್ವಯವಾಗುವಂತೆ ವಂಶಪಾರಂಪರ್ಯದ ಎಲ್ಲಾ ಗ್ರಾಮೀಣ ಹಂತದ ವಿಲೇಜ್ ಆಫೀಸರ್ಸ್ ಹುದ್ದೆಗಳು ರದ್ದಾದ್ದರಿಂದ ಕೆಳ ಹಂತದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ನಮ್ಮನ್ನು ಆಡಳಿತಾತ್ಮಕ ದೃಷ್ಟಿಯಿಂದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಗೆ ಸಹಾಯ ಮಾಡುವ ಸಲುವಾಗಿ 10450 ಗ್ರಾಮ ಸಹಾಯಕರ ಹುದ್ದೆಗಳನ್ನು ಸೃಜಿಸಿ) ಆಗಿಂದ್ದಾಗೆ ವೇತನ ಹೆಚ್ಚಳ ಮಾಡುತ್ತಾ ಬಂದು 2007ನೇ ಸಾಲಿನಲ್ಲಿ ಗ್ರಾಮ ಸಹಾಯಕರ ಹುದ್ದೆಗಳನ್ನು ಖಾಯಂಗೊಳಿಸಿ ಪ್ರಸ್ತುತ 15,000/- ಮಿತ ವೇತನ ಮಾತ್ರ ಪಾವತಿಸಲಾಗುತ್ತಿರುತ್ತದೆ.

    ಆದರೆ ಯಾವುದೇ ಸೇವಾ ಭದ್ರತೆ ಕಲ್ಪಿಸಿರುವುದಿಲ್ಲ. ಸದರಿ ವೇತನದಿಂದ ಇಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ, ತಂದೆ ತಾಯಿಗಳ ಸಂಧ್ಯಾ ಕಾಲದ ಪೋಷಣೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆಗೆ ತುಂಬಾ ಕಷ್ಟಕರವಾಗಿರುತ್ತದೆ. ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ನಾವು ನಡೆಸಿದ ಮುಷ್ಕರದಲ್ಲಿ ಸರ್ಕಾರದ ಮಾನ್ಯ ಕಂದಾಯ ಸಚಿವರು ಮುಷ್ಕರದ ಸ್ಥಳಕ್ಕೆ ಆಗಮಿಸಿ ಗ್ರಾಮ ಸಹಾಯಕರಿಗೆ ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಸೇವಾ ಭದ್ರತೆ ನೀಡಿ ಡಿ. ಗ್ರೂಪ್ ಸಮಾನವಾದ ವೇತನವನ್ನು ಪಡೆಯಲು ತ್ವರಿತವಾಗಿ ಆದೇಶ ನೀಡಿ ಉಳಿದ ಬೇಡಿಕೆಗಳನ್ನು ಮಾನ್ಯ ಮುಖ್ಯಮಂತ್ರಿಗಳವರ ಜೊತೆ ಚರ್ಚಿಸಿ ಆದಷ್ಟು ಬೇಗನೆ ಈಡೇರಿಸುವುದಾಗಿ ಭರವಸೆ ನೀಡಿ ಬಂದಿರುತ್ತಾರೆ.

   ಆದರೆ ಮುಷ್ಕರ ನಡೆದು ಎರಡು ವರ್ಷಗಳಾದರೂ ಇದುವರೆಗೂ ನಮ್ಮ ಬೇಡಿಕೆ ಈಡೇರಿರುವುದಿಲ್ಲ. ಮುಖ್ಯವಾಗಿ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ನೀಡಿ ಡಿ. ಗ್ರೂಪ್ ಸಮಾನ ವೇತನ ನೀಡಲು ಪರಿಶೀಲಿಸಿ ಕಾನೂನು ಅಭಿಪ್ರಾಯ ಪಡೆಯಲು ಆದೇಶಿಸಿರುವ ಮೇರೆಗೆ ಅಂದಿನ ಅಡ್ವಕೇಟ್ ಜನರಲ್ ಪ್ರೋ।। ರವಿವರ್ಮ ಕುಮಾರ್‌ರವರು ಅವರ ವರದಿಯಲ್ಲಿ ಗ್ರಾಮ ಸಹಾಯಕರು ಸರ್ಕಾರದ ಮಾತೃ ಇಲಾಖೆಯಲ್ಲಿ ತಳ ಹಂತದಲ್ಲಿ ಕಾರ್ಯನಿರ್ವಹಿಸುವ ಮುಖ್ಯ ಕೆಲಸಗಾರರಾಗಿದ್ದು, ನಮ್ಮಗಳ ಸೇವೆಯನ್ನು ಗುರುತಿಸಿ ಕಂದಾಯ ಇಲಾಖೆಗೆ ನಮ್ಮ ಸೇವೆ ಅವಶ್ಯವಿರುವುದನ್ನು ಮನಗಂಡು ನಮ್ಮ ಹಾಗೂ ಕುಟುಂಬಗಳ ಭದ್ರತೆಗಾಗಿ ಡಿ. ಗ್ರೂಪ್ ನೌಕರರೆಂದು ಪರಿಗಣಿಸಿ ಅದಕ್ಕೆ ಸಮಾನವಾದ ವೇತನ ನೀಡಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

   ಪ್ರತಿಭಟನೆಯಲ್ಲಿ ನಂಜನಗೂಡು ತಾಲೂಕಿನ ಅಧ್ಯಕ್ಷ ಎಸ್ ಎಂ ಸತೀಶ್, ಪ್ರಧಾನ ಕಾರ್ಯದರ್ಶಿ ಜವರಯ್ಯ ,ಮರಿಸ್ವಾಮಿ, ನಂಜುಡಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗಿ ಆಗಿದ್ರು.

Recent Articles

spot_img

Related Stories

Share via
Copy link