ಅಲೆಮಾರಿಗಳಿಗೆ ವಸತಿ ಕಲ್ಪಿಸಲು ಆಗ್ರಹ

ಹುಳಿಯಾರು:

                  ಹುಳಿಯಾರು ಕೆರೆ ಅಂಗಳದಲ್ಲಿ ಕಳೆದ ಮೂರ್ನಾಲ್ಕು ದಶಕಗಳಿಂದಲೂ ಹಾಲಿ ವಾಸವಾಗಿರುವ ಅಲೆಮಾರಿ ಸಮುದಾಯದವರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಚಿಕ್ಕನಾಯಕನಹಳ್ಳಿ ತಾಲೂಕು ಲಂಚ ಮುಕ್ತ ವೇದಿಕೆಯ ಅಧ್ಯಕ್ಷ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಆಗ್ರಹಿಸಿದ್ದಾರೆ.
                  ಸಮಾಜದಲ್ಲಿ ಶೋಷಿತರಿಂದಲೇ ಶೋಷಣೆಗೊಳಪಡುವ ಸಮುದಾಯಗಳಾದ ಕಿಳ್ಳೇ ಕ್ಶಾತರು, ಧಕಲರು, ಪಿಂಜಾರರು, ಹಂದಿಜೋಗಿಗಳು ಹೀಗೆ ಅಲೆಮಾರಿ ಸಮುದಾಯಕ್ಕೆ ಸೇರಿದ ಸುಮಾರು ಐವತ್ತಕ್ಕೂ ಹೆಚ್ಚು ಕುಟುಂಬಳು ಇಂದಿಗೂ ಹುಳಿಯಾರು ಕೆರೆ ದಡದಲ್ಲಿ ವಾಸಿಸುತ್ತಿದ್ದಾರೆ.
                 ಕೂದಲು ವ್ಯಾಪಾರ, ಪಿನ್ನು ವ್ಯಾಪಾರ, ಹಳೆ ಪೇಪರ್, ಪ್ಲಾಸ್ಟಿಕ್ ವ್ಯಾಪಾರ ಹೀಗೆ ಊರುರು ತಿರುಗಿ ನಾಲ್ಕು ಕಾಸು ದುಡಿಯುವ ಇವರಿಗೆ ಶಾಶ್ವತ ವಸತಿ ಸೌಲಭ್ಯವಿಲ್ಲದೆ ಕೆರೆ ದಡದಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರೆ. ಅದೂ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಲ್ಲದೆ ಕೊಳಚೆಯ ನಡುವೆಯೇ ವಾಸಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
                ಇನ್ನು ಮಳೆ ಬಂದರೆ ನೀರು ನುಗ್ಗುವ, ಬಿಸಿಲ ಝಳಕ್ಕೆ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗುವ ಆತಂಕದ ನಡುವೆ ವಾಸಿಸುತ್ತಿದ್ದಾರೆ. ಹಾಗಾಗಿ ವಸತಿ ಯೋಜನೆಯಲ್ಲಿ ಸೂಕ್ತ ವಸತಿ ಸೌಲಬ್ಯ ಕಲ್ಪಿಸುವಂತಯೆ ದಶಕಗಳಿಂದ ಜನಪ್ರತಿನಿಧಿಗಳನ್ನೂ, ಅಧಿಕರಿಗಳನ್ನೂ ಕೇಳುತ್ತಿದ್ದರೂ ನಯಾರೊಬ್ಬರ ಇವರ ಮನವಿಗೆ ಸ್ಪಂಧಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
               ಹುಳಿಯಾರು ಹೋಬಳಿಯಲ್ಲಿ ಈ ಕುಟುಂಬಗಳಿಗೆ ವಾಸಿಸಲು ಯೋಗ್ಶವಾದ ಕನಿಷ್ಠ 6 ಎಕರೆ ಜಾಗ ಗುರುತಿಸಲು ತಾಲೋಕು ಆಡಳಿತ ವಿಫಲವಾಗಿದೆ. ಕಂಪನಹಳ್ಳಿ ಬಳಿ 40 ಎಕರೆ ಸರ್ಕಾರಿ ಜಾಗವಿದ್ದರೂ ಅದನ್ನು ಉಳ್ಳವರಿಗೆ, ಪ್ರಭಾವಿಗಳಿಗೆ ಕೊಡಲು ಹುನ್ನಾರ ನಡೆಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಕಂಪನಹಳ್ಳಿ ಬಳಿ ಅಲೆಮಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಮುಂದಾಗದಿದ್ದರೆ ಪ್ರತಿಭಟನೆಯ ಹಾದಿ ತಿಳಿಯಬೇಕಾದೀತು ಎಂದು ಎಚ್ಚರಿಸಿದ್ದಾರೆ.

Recent Articles

spot_img

Related Stories

Share via
Copy link