ಬೆಂಗಳೂರು
ಬ್ಯಾಂಕ್ಗಳ ಬಳಿ ಹೊಂಚು ಹಾಕಿ ಕುಳಿತು ಹಣ ಡ್ರಾ ಮಾಡಿಕೊಂಡು ಹೋಗುವ ಸಾರ್ವಜನಿಕರನ್ನು ಹಿಂಬಾಲಿಸಿ ಅವರ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಅಂತಾರಾಜ್ಯ ಕಳ್ಳರ ಗ್ಯಾಂಗ್ನ್ನು ನೆಲಮಂಗಲ ಟೌನ್ poಲೀಸರು ಬಂಧಿಸಿ 8 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರದ ನೆಲ್ಲೂರಿನ ಜಪಾನಿಯ, ಸ್ಯಾಮ್ ಸನ್, ಅರ್ಜುನ್, ರಾಕೇಶ್, ಸುನಿಲ್, ರಾಕೇಶ್, ವಿಜಯ ಕುಮಾರ್, ಭಾಸ್ಕರ್ ಸೇರಿ, 8 ಮಂದಿ ಅಂತಾರಾಜ್ಯ ಕಳ್ಳರನ್ನು ಬಂಧಿಸಿ, ಇವರ ತಂಡದಲ್ಲಿದ್ದು ಪರಾರಿಯಾಗಿರುವ ಇನ್ನೂ ಮೂವರಿಗಾಗಿ ತೀವ್ರಶೋಧ ನಡೆಸಲಾಗಿದೆ ಎಂದು ಗ್ರಾಮಾಂತರ ಎಸ್ಪಿ ಶಿವಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








