ವಾಜಪೇಯಿ ಜನ್ಮದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮ

ದಾವಣಗೆರೆ:

     ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದಿಂದ ಮಂಗಳವಾರ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ 94ನೇ ಜನ್ಮದಿನವನ್ನು ಸುಶಾಸನ್ ದಿವಸ್ ಆಗಿ ಆಚರಿಸಲಾಯಿತು.

      ಈ ಕಾರ್ಯಕ್ರಮದ ಪ್ರಯುಕ್ತ ಪಕ್ಷದ ವಿವಿಧ ಮೋರ್ಚಾಗಳಿಂದ ನಗರದಲ್ಲಿ ಮಂಗಳವಾರ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಅಂಗವಿಕಲರ ಆಶಾಕಿರಣ ಟ್ರಸ್ಟ್‍ನಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಸೇವಾ ಕಾರ್ಯಕ್ರಮ ನಡೆಸಲಾಯಿತು. ಸಂಸ್ಥೆಯ ವಿಶೇಷಚೇತನ ಮಕ್ಕಳೊಂದಿಗೆ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಹೆಚ್.ಎನ್.ಶಿವಕುಮಾರ, ಅಣಬೇರು ಶಿವಪ್ರಕಾಶ, ಶಾಂತಿಭೂಷಣ, ಸಂತೋಷ, ನವೀನ್ ಪಾಟೀಲ್, ರಾಜು ನೀಲಗುಂದ, ಗುರು ಕೊಡೆಕಲ್, ಪ್ರವೀಣ ಜಾಧವ್ ಮತ್ತಿತರರು ಹಾಜರಿದ್ದರು.

     ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಚಾಮರಾಜಪೇಟೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ(ಸರ್ಕಾರಿ ಹೆರಿಗೆ ಆಸ್ಪತ್ರೆ)ಯಲ್ಲಿ ಹೆಣ್ಣುಮಕ್ಕಳಿಗೆ ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು. ಸಂಸದ ಜಿ.ಎಂ.ಸಿದ್ದೇಶ್ವರ, ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಸಿ.ಶ್ರೀನಿವಾಸ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ರಾಜಶೇಖರ, ಮುಖಂಡರಾದ ರಾಜನಹಳ್ಳಿ ಶಿವಕುಮಾರ, ಗೌತಮ್ ಜೈನ್, ಆನಂದರಾವ್ ಶಿಂಧೆ, ಎಲ್.ಡಿ.ಗೋಣೆಪ್ಪ, ವೈ.ಮಲ್ಲೇಶ, ಶಿವನಗೌಡ ಪಾಟೀಲ್, ಚೇತೂಬಾಯಿ, ಶ್ರೀಕಾಂತ್, ನವೀನ ಕುಮಾರ, ಶಂಕರಗೌಡ ಬಿರಾದಾರ್, ಧನುಷ್ ರೆಡ್ಡಿ, ಮಟ್ಟಿಕಲ್ ಕರಿಬಸಪ್ಪ, ಶ್ರೇಣಿಕ್ ಜೈನ್, ತರಕಾರಿ ಶಿವು, ಗುರು ಸೋಗಿ, ಗುಮ್ಮನೂರು ಶ್ರೀನಿವಾಸ, ಟಿಂಕರ್ ಮಂಜಣ್ಣ, ಪ್ರಕಾಶ, ಗೋವಿಂದ, ಚಂದನ್, ರಾಜಕುಮಾರ ಶಿವಳ್ಳಿ ಹಾಜರಿದ್ದರು.

     ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವತಿಯಿಂದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಶಾಸಕ ಎಸ್.ಎ.ರವೀಂದ್ರನಾಥ, ಡಾ.ಎ.ಹೆಚ್.ಶಿವಯೋಗಿಸ್ವಾಮಿ, ದಾವಣಗೆರೆ ಉತ್ತರ ಬಿಜೆಪಿ ಅಧ್ಯಕ್ಷ ಮುಕುಂದಪ್ಪ, ಪ್ರಧಾನ ಕಾರ್ಯದರ್ಶಿ ಶಿವರಾಜ ಪಾಟೀಲ್, ಯುವ ಮೋರ್ಚಾ ಅಧ್ಯಕ್ಷ ವೀರೇಶ ಪೈಲ್ವಾನ್, ಸವಿತಾ ರವಿಕುಮಾರ, ಶ್ರೀನಿವಾಸ, ದುರುಗೇಶ, ಕಾಂತರಾಜ ಇತರರು ಹಾಜರಿದ್ದರು. ಇದಲ್ಲದೆ, ನಗರದ ವಿವಿಧ ವಾರ್ಡ್‍ಗಳಲ್ಲಿ ಬೂತ್ ಸಮಿತಿಗಳ ವತಿಯಿಂದ ಸುಶಾಸನ್ ದಿವಸ್ ಆಚರಿಸಲಾಯಿತು. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link