ಬದ್ಧತೆಯ ಅಧ್ಯಯನದಿಂದ ಯಶಸ್ಸು ಕಟ್ಟಿಟ್ಟ ಬುತ್ತಿ

ದಾವಣಗೆರೆ :

       ವಿದ್ಯಾರ್ಥಿಗಳು ಬದ್ಧತೆಯಿಂದ ವ್ಯಾಸಂಗ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಡಾ.ಪರ್ವತಪ್ಪ ಮೆಮೋರಿಯಲ್ ಟ್ರಸ್ಟ್‍ನ ಟ್ರಸ್ಟಿ ಪ್ರೇಮಾ ನಾಗರಾಜ್ ಅಭಿಪ್ರಾಯಪಟ್ಟರು.

        ನಗರದ ಹರಿಹರ ರಸ್ತೆಯಲ್ಲಿರುವ ರಶ್ಮಿ ಬಾಲಕೀಯರ ವಸತಿ ಶಾಲಾ ಸಭಾಂಗಣದಲ್ಲಿ ನಗರದ ಕಲಾಕುಂಚ ಸಾಂಸ್ಕತಿಕ ಸಂಸ್ಥೆ ಏರ್ಪಡಿಸಿದ ಎಸ್.ಎಸ್.ಎಲ್.ಸಿ. ಪರೀಕ್ಷಾ ಪೂರ್ವಬಾವಿ ತಯಾರಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

          ಶಿಕ್ಷಣ ಒಂದು ತಪಸ್ಸು ಎಂಬ ಭಾವನೆಯಿಂದ ತಮ್ಮನ್ನು ತಾವು ಮಕ್ಕಳು ವಿದ್ಯಾಭ್ಯಾಸಕ್ಕೆ ಸಮರ್ಪಣೆ ಮಾಡಿ ಬದ್ಧತೆಯಿಂದ ವ್ಯಾಸಂಗ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ, ವಿನಯತೆ, ವಿಧೇಯತೆ, ಸೌಜನ್ಯ, ಸಂಸ್ಕತಿಗಳಿಂದ ವಿದ್ಯಾರ್ಚನೆಗೆ ಪರಿಪೂರ್ಣತೆ ಬರುತ್ತದೆ ಎಂದು ಹೇಳಿದರು.

         ಎಸ್.ಎಸ್.ಎಲ್.ಸಿ. ಪರೀಕ್ಷೆ ಪೂರ್ವ ಸಿದ್ಧತೆ” ಎಂಬ ವಿಚಾರವಾಗಿ ಉಪನ್ಯಾಸ ನೀಡಿದ ಕಲಾಕುಂಚ ಸಾಂಸ್ಕತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, “ಉತ್ತಮ ಫಲಿತಾಂಶದಿಂದ ಆಗುವ ಉಪಯೋಗ ಸಾಧನೆ ಮಾಡಿದರೆ ಸಿಗುವ ಸ್ಥಾನ, ಮಾನ, ಗೌರವ, ಸನ್ಮಾನಗಳ ವಿವರ ನೀಡಿ ಮಕ್ಕಳಿಗೆ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸುವ ನಿಟ್ಟಿನಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು.

         ಅಧ್ಯಕ್ಷತೆ ವಹಿಸಿದ್ದ ಕಲಾಕುಂಚದ ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್ ಮಾತನಾಡಿ, ಪರೀಕ್ಷೆಗೆ ಮಕ್ಕಳು ಹೆದರಬಾರದು ಪರೀಕ್ಷೆಯೇ ನಿಮಗೆ ಹೆದರಬೇಕು ಜೀವನದ ಮತ್ತು ವಿದ್ಯಾಭ್ಯಾಸದ ಒಂದು ತಿರುವು ಎಸ್.ಎಸ್.ಎಲ್.ಸಿ. ಇಲ್ಲಿ ನೀವು ಸಾಧನೆ ಮಾಡಿ ಗೆದ್ದರೆ ಜೀವನ ಪೂರ್ತಿ ಸಾಧನೆಯ ಹಾದಿಯಲ್ಲೇ ಮುನ್ನಡೆಯುವಿರಿ ಎಂದರು.

           ಕಲಾಕುಂಚದ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿಯವರು, ಉಪಾಧ್ಯಕ್ಷರಾದ ಶೈಲಾ ವಿಜಯಕುಮಾರ್, ಕಲಾಕುಂಚದ ಕಛೇರಿ ಕಾರ್ಯದರ್ಶಿ ವಿಜಯಕುಮಾರ್‍ಶೆಟ್ಟಿ ಯಕ್ಷರಂಗದ ಗೌರವಾಧ್ಯಕ್ಷರಾದ ಬಿ.ಶಾಂತಪ್ಪ ಪೂಜಾರಿ, ಸಮಿತಿ ಸದಸ್ಯರಾದ ಸರ್ವ ಮಂಗಳ ಚಂದ್ರಯ್ಯ, ಗೀತಾ ಪ್ರಭಾಕರ ವೆದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಂತೋಷ್ ಬಿ. ಸ್ವಾಗತಿಸಿದರು, ಶಿಕ್ಷಕ ಅಮರೇಶ್ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ಧನಂಜಯ ಎ.ಸಿ.ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link