ದಾವಣಗೆರೆ:
ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಮೂರ್ತಿ ಮಹಾಸ್ವಾಮಿಯವರ ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿಕ್ಕಾಗಿ ಇಲ್ಲಿನ ಸಿದ್ಧಗಂಗಾ ಶಾಲೆಯ ಮೈದಾನದಲ್ಲಿ ಸಿದ್ಧಗಂಗಾ ಶ್ರೀಗಳ ಬೃಹತ್ ಚಿತ್ರ ಅರಳಿದೆ.
ಶಾಲೆಯ ಆವರಣದಲ್ಲಿ ಸುಮಾರು 90 ಚದರ ಅಡಿ ಜಾಗದಲ್ಲಿ ಶಾಲೆಯ ಸುಮಾರು 50 ವಿದ್ಯಾರ್ಥಿಗಳು, ಸುಮಾರು 100 ಕೆಜಿ ಬ್ಲ್ಯಾಕ್ ಆಕ್ಸೈಡ್ ಬಳಸಿಕೊಂಡು ಈ ಬೃಹದಾಕಾರದ ಚಿತ್ರವನ್ನು ಅರಳಿಸಿದ್ದು, ನೋಡಲು ನಯನ ಮನೋಹರವಾಗಿದೆ.
ಶಾಲೆಯ ಮುಖ್ಯೋಪಾಧ್ಯಾಯಿನಿ ಡಿಸೋಜಾ ಅವರ ಆಸೆಯಂತೆ ವಿದ್ಯಾ ಸಂಸ್ಥೆಯ ನಿರ್ದೇಶಕ ಡಾ.ಜಯಂತ್ ಹಾಗೂ ಕಲಾ ಶಿಕ್ಷಕ ಪ್ರಸನ್ನಕುಮಾರ್ ಮತ್ತಿತರರ ಮಾರ್ಗದರ್ಶನದಲ್ಲಿ ಮೊದಲು ಕಂಪ್ಯೂಟರ್ನಲ್ಲಿ ಚಿತ್ರ ರಚಿಸಿಕೊಂಡು, ಅದರ ಪ್ರಿಂಟ್ ಪಡೆದು ಅದನ್ನು 90 ಅಡಿಗೆ ಜೋಡಿಸಿದ ವಿದ್ಯಾರ್ಥಿಗಳು ರಂಗೋಲಿ ಹಾಕುವ ಮಾದರಿಯಲ್ಲಿ ಬ್ಲ್ಯಾಕ್ ಆಕ್ಸೈಡ್ ಅನ್ನು ತುಂಬುತ್ತಾ ಹೋಗುವ ಮೂಲಕ ಈ ಚಿತ್ರವನ್ನು ಬಿಡಿಸಿದ್ದಾರೆ.
ಚಿತ್ರ ಬಿಡಿಸುವುದು ಪೂರ್ಣಗೊಂಡ ಬಳಿಕ ಶಾಲೆಯ ವಿದ್ಯಾರ್ಥಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಚಿತ್ರದ ಸುತ್ತಲೂ ಚೌಕಾಕಾರದಲ್ಲಿ ನಿಂತು ನಡೆದಾಡುವ ದೇವರು ಶ್ರೀಶಿವಕುಮಾರ ಸ್ವಾಮಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಶಾಲೆಯ ಮೂರನೇಯ ಅಂತಸ್ಥಿನಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನಿಂತು ಈ ಬೃಹದಾಕಾರದ ಚಿತ್ರವನ್ನು ಕಣ್ಣು ತುಂಬಿಕೊಂಡರು. ಈ ಚಿತ್ರ ಪ್ರದರ್ಶನ ಇನ್ನೂ ಮೂರು ದಿನಗಳ ವರೆಗೆ ಇರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/01/23_dvg_03_1.gif)