ಬೆಂಗಳೂರು:
ಲೋಕಸಭೆ ಚುನಾವಣೆಯ ಮತದಾನದ ದಿನ ಹತ್ತಿರ ಬಂದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಒಬಿಸಿ ಮುಖಂಡರ ಸಭೆಯ ಬಳಿಕ ಕೆಪಿಸಿಸಿ ಒಬಿಸಿ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ್ ಅವರು ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ರಾಜ್ಯದಲ್ಲಿ ಶೇ೫೦ ರಷ್ಟು ಹಿಂದುಳಿದವರಿದ್ದಾರೆ ಆದರೆ ಒಂದೇ ಒಂದು ಸೀಟನ್ನು ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ ಹಾಗೆ ನೋಡಿದರೆ ಮೈತ್ರಿ ಪಕ್ಷಗಳು ಎಂಟು ಸೀಟು ಒಬಿಸಿಗೆ ನೀಡಿವೆ ಎಂದು ತಿಳಿಸಿದ್ದಾರೆ .
ಬಿಜೆಪಿಯವರದ್ದು ಯಾವ ರೀತಿಯ ಸಾಮಾಜಿಕ ನ್ಯಾಯ ಎಂದು ನಮಗೆ ತಿಳಿಯುತ್ತಿಲ್ಲ ಮತ್ತು ಕಾಂಗ್ರೆಸ್ ನಲ್ಲಿ ಒಬಿಸಿಗೆ ಐದು ಸೀಟು ನೀಡಲಾಗಿದೆ ಹಾಗಾಗಿ ಸಾಮಾಜಿಕ ನ್ಯಾಯ ಕೊಟ್ಟಿರುವುದು ಕಾಂಗ್ರೆಸೇ ಹೊರತು ಬಿಜೆಪಿಯಲ್ಲ.
ಹಾಗೂ ಕೆಳ,ಶೋಷಿತ ವರ್ಗಗಳನ್ನು ಬಿಜೆಪಿ ಕಡೆಗಣಿಸಿದೆ ಮತ್ತು ಈ ವಿಷಯದ ಬಗ್ಗೆ ಹಿಂದುಳಿದ ಮತದಾರರು ಎಚ್ಚೆತ್ತುಕೊಳ್ಳಬೇಕು ರಂದು ಒಬಿಸಿ ಸಮುದಾಯಗಳಿಗೆ ಎಂಡಿಎಲ್ ಕರೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
