ದೇವೇಗೌಡರನ್ನು ಬೆಂಬಲಿಸಲು ಮುಸ್ಲಿಂ ಮುಖಂಡರಿಗೆ ಮನವಿ

ತುರುವೇಕೆರೆ:

     ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಪಕ್ಷದಿಂದ ಸ್ಪರ್ಧಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಯುವ ಜೆಡಿಎಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಮುಸ್ಲಿಂ ಸಮುದಾಯವನ್ನು ಕೋರಿದ್ದಾರೆ.

      ತಾಲೂಕಿನ ಮಾಯಸಂದ್ರದಲ್ಲಿ ಶುಕ್ರವಾರ ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿದ ಅವರು ದೇವೆಗೌಡರು ಕೇವಲ ಒಕ್ಕಲಿಗ ಜನಾಂಗದ ಮುಖಂಡರು ಮಾತ್ರವಲ್ಲದೇ ಸರ್ವ ಧರ್ಮಗಳ ಹಿತವನ್ನು ಕಾಣುವ ವಿಶೇಷ ವ್ಯಕ್ತಿತ್ವವನ್ನು ಹೊಂದಿದವರು.

       ರೈತರ ಕಣ್ಮಣಿಯಾಗಿ ರೈತರ ಶ್ರೇಯೋಭಿವೃಧ್ಧಿಯನ್ನೇ ಹಗಲಿರುಳೂ ಬಯಸುವ ಹೆಚ್.ಡಿ.ದೇವೇಗೌಡರನ್ನು ಗೆಲ್ಲಿಸಿದಲ್ಲಿ ರೈತಾಪಿಗಳ ಬಾಳಿನಲ್ಲಿ ಹೊಸಬೆಳಕು ಮೂಡಲಿದೆ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಾದ ಸಂಧರ್ಭದಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಮೀಸಲಾತಿ ತಂದು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಬೆಳೆಯಲು ಸಹಕಾರಿಯಾಗಿದ್ದರು.

        ದೂರದೃಷ್ಠಿತ್ವವನ್ನು ಹೊಂದಿರುವ ದೇವೇಗೌಡರು ಎಲ್ಲಾ ಸಮುದಾಯದ ನಾಯಕರಾಗಿದ್ದಾರೆ. ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ. ಮುಂದೆಯೂ ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಗಮವಾಗಿ ನಡೆಯಲು ದೇವೇಗೌಡರನ್ನು ಲೋಕಸಭೆಗೆ ಕಳಿಸುವುದು ಅತ್ಯಗತ್ಯವಾಗಿದೆ. ಇದರಿಂದ ಜಿಲ್ಲೆಯ ಅಭಿವೃಧ್ಧಿಯೂ ಆಗಲಿದೆ ಎಂದು ತಿಳಿಸಿದರು.

         ಈ ಸಂಧರ್ಭದಲ್ಲಿ ಮುಸ್ಲಿಂ ಮುಖಂಡರುಗಳಾದ ಷಾಹೇಅರಬ್(ಬಾಬು), ಜಾವಿದ್, ಮಹಮ್ಮದ್, ಗೌಸ್, ಯಾಸಿನ್, ಮುಬಾರಕ್, ಅಫ್ಜಲ್, ಶಬ್ಬೀರ್, ಮೊಹಿದ್ದೀನ್, ಇಕ್ಬಾಲ್, ಅಕ್ಬರ್ ಸೇರಿದಂತೆ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link