ನಮ್ಮ ಸಂವಿಧಾನವು ಎಲ್ಲಾ ವರ್ಗದ ಅಭಿವೃದ್ದಿಗೆ ಪೂರಕವಾಗಿದೆ:ಸಾಹಿತಿ ಎನ್.ನಾಗಪ್ಪ

ತುಮಕೂರು:

      ನಮ್ಮ ಭಾರತದ ಸಂವಿಧಾನವು ವಿಶ್ವದಲ್ಲಿ ಶ್ರೇಷ್ಠ ಸಂವಿಧಾನವಾಗಿದೆ.ನಮ್ಮ ಸಂವಿಧಾನವು ಯಾವುದೇ ಒಂದೇ ವರ್ಗವನ್ನು ಗಮನದಲ್ಲಿಯಿಟ್ಟು ಕೊಂಡು ರಚಿಸಿಲ್ಲ . ಎಲ್ಲಾ ವರ್ಗದ ಅಭಿವೃದ್ದಿಗೆ ಅವಕಾಶ ಓದಗಿಸಿದೆ, ಮಹಿಳೆಯರು, ಶೋಷಿತರು, ಕಾರ್ಮಿಕರ,ಅಲ್ಪಸಂಖ್ಯಾತರ ಘನತೆಯಿಂದ ಸ್ವಾಭಿಮಾನಿಯುತವಾಗಿ ಜೀವನ ನಡೆಸಲು ಸಂವಿಧಾನ ಅವಕಾಸ ಮಾಡಿಕೊಟ್ಟಿದೆ ಎಂದು ಸಾಹಿತಿಗಳಾದ ಎನ್.ನಾಗಪ್ಪರವರು ತಿಳಿಸಿದರು.

       ದಿನಾಂಕ-05-04-2019ರಂದು ಕೋತಿತೋಪಿನ ಶೈಕ್ಷಣಿಕ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣ ಸಮಿತಿವತಿಯಿಂದ ಡಾ.ಬಾಬುಜಗಜೀವನ್ ರಾಂರವರು 112ನೇ ಜಯಂತಿಯ ಅಂಗವಾಗಿ ಸಂವಿಧಾನ ಉಳಿವಿಗಾಗಿ ನಮ್ಮ ಮತ ಅಸ್ತ್ರವಾಗಲಿ ಎಂಬ ಜಾಗೃತಿ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಎನ್. ನಾಗಪ್ಪರವರು ಕಾರ್ಯಕ್ರಮವನ್ನು ಇಂದು ವ್ಯವಸ್ಥೆಯಲ್ಲಿ ಬಹುತೇಕ ಮಂದಿ ಮನುಷ್ಯ ಧರ್ಮದ ಬಗ್ಗೆ ಮಾತನಾಡದೆ ಜಾತಿ,ಧರ್ಮಗಳ ಬಗ್ಗೆ ಮಾತನಾಡುವುದು ದುರಾದೃಷ್ಟಕರವಾಗಿದೆ.

      ಸಾವಿರಾರು ವರ್ಷಗಳಿಂದ ಯಾರು ಶೋಷಣೆಗೆ ಒಳಗಾಗಿದ್ದರು ಅವರೆಲ್ಲ ದಲಿತರೇ ಆಗಿದ್ದಾರೆ. ಆದರೆ ಇಂದು ಅಂಬೇಡ್ಕರ್ ಅವರನ್ನು ದಲಿತ ವರ್ಗಕ್ಕೆ ಸೀಮಿತ ಮಾಡಿರುವುದು ವಿಷಾದನೀಯವಾಗಿದೆ. ಪಂಚಾಂಗ ಇಟ್ಟುಕೊಂಡು ಬದುಕುವರಿಗೆ ಸಂವಿಧಾನದ ಮಹತ್ವ ತಿಳಿಯದೆ ಅಗೌರವಾಗಿ ಮಾತನಾಡುತ್ತೀದ್ದಾರೆ ನಮ್ಮಗೆ ರಾಜಕೀಯ ಪ್ರಜ್ಞೇಯು ಜಾತಿ,ಧರ್ಮವನ್ನು ಮೀರಿದಾಗಿರಬೇಕು.

      ಈ ಚುನಾವಣೆಯಲ್ಲಿ ಸಂವಿಧಾನ ಉಳಿವಿಗಾಗಿ ನಮ್ಮ ಮತ ಚಲಾವಣೆಯಾಗಬೇಕೆಂದು ಕರೆ ನೀಡಿದ ಅವರು ಬಾಬು ಜಗಜೀವನ್‍ರಾಂ ಮತ್ತು ಅಂಬೇಡ್ಕರ್ ಶೋಷಿತರ ಆಶಾಕಿರಣವಾಗಿದ್ದರೆ, ಬಾಬು ಜಗಜೀವನ್‍ರಾಂ ರವರು ಹಸಿರು ಕ್ರಾಂತಿ ಹರಿಕಾರಗಿದ್ದು, ಅಂದು ಹಸಿವನ್ನು ಹೋಗಲಾಡಿಸಲು ಬಹಳಷ್ಟು ಶ್ರಮಿಸಿದ್ದಾರೆ ಎಂದರು.

       ನಂತರ ಕಾರ್ಯಕ್ರಮ ಕುರಿತು ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತೀನ ಅಧ್ಯಕ್ಷರಾದ ಬಾ,ಹಾ.ರಮಕುಮಾರಿ ರವರು ಮತದಾನವು ಸಂವಿದಾನ ನೀಡಿರುವ ವಿಶಿಷ್ಟ ಮತ್ತು ಮಹತ್ವಯುಳ್ಳ ಹಕ್ಕು ಆಗಿದೆ, ನಾವು ರಾಜಕೀಯವಾಗಿ ಜಾಗೃತರಾಗಿ ರಾಜಕೀಯ ಪ್ರಜ್ಞೆಯಿಂದ ಸಂವಿಧಾನವನ್ನು ಗೌರವಿಸುವರಿಗೆ ಮತ ನೀಡಬೇಕು ಜೊತೆಗೆ ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಬಗ್ಗೆ ತಿಳಿದುಕೊಂಡು ಪ್ರಶ್ನೆ ಮಾಡು ಮನೊಭಾವ ಬೆಳೆಸಿಕೊಳ್ಳಬೇಕೆಂದರು. ಆದರೆ ಇಂದು ರಾಜಕೀಯ ಪಕ್ಷಗಳು ಜನ ಸಾಮಾನ್ಯರ ದೇಶದ ಸಮಸ್ಯೆಯನ್ನು ಮಾತನಾಡದೇ ತಮ್ಮ ಸ್ವಹಿತಾಸಕ್ತಿಯಲ್ಲಿ ಕಾಲೆಳೆಯುವ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ.

      ನಂತರ ಮಾನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಚಿ.ನಾ.ಪುರುಷೋತ್ತಮ್ ರವರು ಇಂದಿನ ಆಡಳಿತ ಪರಿಣಮ ಮತ್ತು ಸರ್ಕಾರ ನೀತಿಗಳಿಂದ ಶ್ರೀಮಂತರು ಶ್ರೀಮಂತರಾಗಿ ಬಡವರು ಮತ್ತೋಷ್ಟು ಬಡವರಾಗುತ್ತಿದ್ದಾರೆ. ಬಡವರ ಬಗ್ಗೆ ಸರ್ಕಾರಗಳಿಗೆ ಯಾವುದೇ ಕಳಾಜಿಯಿಲ್ಲ, ಬಡವರು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರಿಸುವರಿಗೆ ನಮ್ಮ ಮತ ಹಾಕಬೇಕು, ಆದರೆ ಇಂದು ಚುನಾವಣೆಯಲ್ಲಿ ಶ್ರೀಮಂತರು, ಬಲಾಢ್ಯರು ಆಯ್ಕೆಯಾಗುತ್ತಿರುವುದು ಅಪಾಯಕಾರಿಗಿದೆ ನಾವು ಎಚ್ಚರಿಕೆಯಿಂದ ಮತದಾನ ಮಾಡಬೇಕು, ಸಂವಿಧಾನ ಬಹಳ ಶ್ರೇಷ್ಠವಾಗಿದ್ದು, ಯಾರು ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಹಸಿದವರಿಗೆ ಭಾವುಕತೆಯ ಪಾಠ ಮೋಸಕ್ಕಿಂತ ಕ್ರೌರ್ಯ: ಎ, ನರಸಿಂಹಮೂರ್ತಿ

      ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡುತ್ತಾ ಕೊಳಗೇರಿ ಸಮಿತಿಯು ಕೊಳಗೇರಿ ಜನರಿಗೆ ಮತದಾನದ ಬಗ್ಗೆ ಜಾಗೃತಿ, ಅರಿವುಯ ಮೂಡಿಸು ಕೆಲಸವನ್ನು ಕಳೆದ 20 ವರ್ಷಗಳಿಂದ ನಿರಾಂತರವಾಗಿಮಾಡುತ್ತಾ ಬರುತ್ತಿದೆ, ನಮ್ಮ ಮತವು ಮಾರಾಟದ ವಸ್ತುವಲ್ಲ ಮತವನ್ನು ನಮ್ಮ ಅಭಿವೃದ್ದಿ ಏಳಿಗೆಗೆ ಒತ್ತು ನೀಡುವರಿಗೆ ಮತಹಾಕಬೇಕು ನಮ್ಮ ಜಾಗೃತಿಯಿಂದ ಶೇ 20%ರಷ್ಟು ಜನರು ರಾಜಕೀಯ ಪ್ರಜ್ಞೆ ಮೂಡಿಸಿಕೊಂಡಿದ್ದಾರೆ.

       ಈ ಲೋಕಸಭಾ ಚುನಾವಣೆಯಲ್ಲಿ ತುಮಕೂರು ನಗರ ಕೊಳಗೇರಿಗಳಲ್ಲಿ ಬೀದಿ ಸಭೆಗಳನ್ನು ಮಾಡಿ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಿ ಸಂವಿಧಾನ ಉಳಿಸುವರಿಗೆ ನಮ್ಮ ಮತ ಚಲಾಯಿಸಲು ಕರೆ ನೀಡಲಾಗುವುದು, ಇಂದು ದೇಶ ಅಪಾಯದಲ್ಲಿದ್ದು ತಮ್ಮ ಆಡಳಿತದ ವೈಪಲ್ಯಗಳನ್ನು ಮುಚ್ಚಿಕೊಳ್ಳಲು ಹಸಿದ ಜನರಿಗೆ ಭಾವುಕತೆಯ ಪಾಠವನ್ನು ಮೇಬಿ ಚೌಕಿದಾರ್ ನಲ್ಲಿ ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಇದು ದೇಶದ ಜನರಿಗೆ ಮಾಡುವ ಮೋಸಕ್ಕಿಂತ ಕ್ರೌರ್ಯವಾಗಿದೆ. ಬಡತನ ಮುಕ್ತ ಮತ್ತು ತಾರತಮ್ಯ ಮುಕ್ತಗೊಳಿಸುವ ಬಗ್ಗೆ ಮಾತನಾಡದೆ ಪ್ರಜಾಪ್ರಭುತ್ವವನ್ನು ನಿರಂಕುಶತ್ವದಡೆಗೆ ಎಳೆಯುವ ಕ್ರಮ ಸಂವಿಧಾನ ವಿರೋಧಿ ಎಂದರು.

        ಈ ಕಾರ್ಯಕ್ರಮದಲ್ಲಿ ಸಮುದಾಯ ಸಂಘಟನೆಯ ಕೆ.ಇ.ಸಿದ್ದಯ್ಯ, ಜಿಲ್ಲಾ ಕೊಳಗೇರಿ ಸಮಿತಿಯ ಉಪಾಧ್ಯಕ್ಷರಾದ ದೀಪಿಕಾ ,ಕಾರ್ಯದರ್ಶಿಯಾದ ಶೆಟ್ಟಾಳಯ್ಯ, ಮತ್ತು ಪದಾಧಿಕಾರಿಗಳು ಕಣ್ಣನ್, ಅರುಣ್, ಶಾರzಮ್ಮ,ಗಂಗಮ್ಮ, ಮಹದೇವಮ್ಮ, ಗುಲ್ನಾಜ್, ರಂಗನಾಥ್, ಸಿದ್ದಪ್ಪ, ಕಾಶಿರಾಜ್, ಗೋವಿಂದ, ಸುಬ್ಬಾ, ಕೃಷ್ಣ, ಸಿದ್ದಪ್ಪ ಹಾಗೂ ವಿವಿಧ ಕೊಳಗೇರಿಗಳ ನೂರಾರು ಕಾರ್ಯಕರ್ತರು ಭಾಗವಹಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link