ಹುಳಿಯಾರು:
ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲಯಲ್ಲಿ ಹುಳಿಯಾರು ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಹುಳಿಯಾರಿನ ಬಸ್ ನಿಲ್ದಾಣದಿಂದ ಹೊರಟು ರಾಜ್ಕುಮರ್ ರೋಡ್, ಬಿ.ಎಚ್.ರೋಡ್, ರಾಮಗೋಪಾಲ್ ಸರ್ಕಲ್, ಪೇಟೆಬೀದಿಯಲ್ಲಿ ಮೋದಿ, ಮೋದಿ, ಮೋದಿ ಎಂಬ ಹರ್ಷೋದ್ಗಾರದ ಘೋಷಣೆಯೊಂದಿಗೆ ಬೈಕ್ ರ್ಯಾಲಿ ನಡೆಸಿದರಲ್ಲದೆ ಕರವೇ ಸರ್ಕಲ್, ಸ್ಟೇಷನ್ ಸರ್ಕಲ್, ರಾಮ್ಗೋಪಾಲ್ ಸರ್ಕಲ್ಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಯುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ ಅವರು ಈ ಸಂದರ್ಭದಲ್ಲಿ ಮಾತನಾಡಿ ಕಳೆದ 5 ವರ್ಷ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯವ ಜೊತೆಗೆ ಕಪ್ಪುಹಣ, ಬಯೋತ್ಪಾದನೆ ಮಟ್ಟಹಾಕಿರುವ ಮೋದಿ ಆಡಳಿತವನ್ನು ದೇಶದ ಜನ ಮೆಚ್ಚಿದ್ದಾರೆ. ಅಲ್ಲದೆ ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಮಾತ್ರ ದೇಶದಲ್ಲಿ ಸುಭದ್ರ ಆಡಳಿತ ಸಿಕ್ಕಿ ದೇಶದ ಜನ ನೆಮ್ಮದಿಯಿಂದ ಇರಬಹುದೆಂದು ತೀರ್ಮಾನಿಸಿ ಮತ ಹಾಕಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಗೆಲುವಿಗೆ ಚಿ.ನಾ.ಹಳ್ಳಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಅವರ ಅವಿರಥ ಶ್ರಮವಿದೆ. ಪಕ್ಷದ ಯಾವ ಸ್ಟಾರ್ ಕ್ಯಾಂಪೇನರ್ಗಳನ್ನು ಬರಮಾಡಿಕೊಳ್ಳದೆ ಮಾಧುಸ್ವಾಮಿ ಅವರೇ ಜಿಲ್ಲೆಯಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿ ಓಡಾಡಿ ದೇವೇಗೌಡರು ಹೇಮೆ ವಿರೋಧಿ ಧೋರಣೆಯನ್ನು ಮತದಾರರಿಗೆ ಮನವರಿಕೆ ಮಾಡಿದ್ದಾರೆ. ಅಲ್ಲದೆ ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಕೊನೆಯಾಡುವ ನಿಟ್ಟಿನಲ್ಲಿ ಪಕ್ಷದ ಎಲ್ಲಾ ನಾಯಕರನ್ನು ಒಗ್ಗೂಡಿಸಿ ಹೋರಾಡಿದ್ದಾರೆ ಎಂದರು.ಪಪಂ ಸದಸ್ಯ ಡಾಬಾಸುರೇಶ್, ಬೀಡನಾಗರಾಜು, ರಂಗಣ್ಣ, ನೈಸ್ ಗುರು, ಶ್ರೀಧರ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
