2 ಕೋಟಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ ಶಾಸಕ ಮಸಾಲೆ ಜಯರಾಂ

ಗುಬ್ಬಿ

   ಹೇಮಾವತಿ ನೀರನ್ನು ರಾಮನಗರ ಹಾಗೂ ಮಾಗಡಿ ಭಾಗಕ್ಕೆ ಹರಿಸಲು ಹೊರಟಿರುವ ಯೋಜನೆಗೆ ಜಿಲ್ಲೆಯ ಹಲವು ಶಾಸಕರು ವಿರೋಧ ವ್ಯಕ್ತ ಪಡಿಸಿದ್ದು ಯಾವುದೇ ಕಾರಣಕ್ಕೂ ಇಲ್ಲಿಂದ ನೀರು ಹರಿಸಲು ಬೀಡುವುದಿಲ್ಲ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲೆ ಜಯರಾಂ ತಿಳಿಸಿದರು.

    ತಾಲೂಕಿನ ಸಿ.ಎಸ್ ಪುರ ಹೋಬಳಿಯ ವೆಂಕಟೆಗೌಡನ ಪಾಳ್ಯ, ಚಿನ್ನನಾಯಕನಪಾಳ್ಯ, ಕೊಡಗಿಹಳ್ಳಿ ಗೊಲ್ಲರಹಟ್ಟಿ ಸೇರಿದಂತೆ ವಿವಿಧ ಭಾಗದಲ್ಲಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ದೇವೆಗೌಡರು ಸಿ.ಎಸ್.ಪುರ ಜನರ ಗಂಗೆಯ ಶಾಪದಿಂದ ಸೋಲು ಕಂಡು ಮನೆಯಲ್ಲಿ ಮಲಗಿದ್ದಾರೆ ತುಮಕೂರಿನ ಜನತೆ ಸ್ವಾಭಿಮಾನಿಗಳು ಎಂದು ತೋರಿಸಿದ್ದಾರೆ ನಮ್ಮ ಸಂಸದರು ಮುಂದಿನ ದಿನದಲ್ಲಿ ನೀರಿನ ದೊಡ್ಡ ಹೋರಾಟ ಮಾಡಲು ಸಿದ್ದತೆ ಮಾಡಿದ್ದು ಇನ್ನೂ ಮುಂದಾದರು ರೇವಣ್ಣ ಹೇಮಾವತಿ ವಿಚಾರದಲ್ಲಿ ತಗಾದೆ ಮಾಡದೆ ಸುಮ್ಮನಿದ್ದರೆ ಒಳ್ಳೆಯದು ಇಲ್ಲದಿದ್ದರೆ ಮುಂದಿನ ದಿನದಲ್ಲಿ ಇನ್ನೂ ದೊಡ್ಡ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದರು.

     ನಮ್ಮ ಭಾಗದಿಂದ ಮಾಗಡಿ ಭಾಗಕ್ಕೆ ನೀರು ತೆಗೆದುಕೊಂಡು ಹೋಗಲು ಡಿ.ಕೆ.ಶಿವಕುಮಾರ್ ಅವರು 600 ಕೋಟಿ ಹಣ ಬಿಡುಗಡೆ ಮಾಡಿಸಿದ್ದಾರೆ ಆದರೆ ಇದಕ್ಕೆ ನೆನ್ನೆ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಶಾಸಕರು ಸಹ ವಿರೋಧ ವ್ಯಕ್ತ ಪಡಿಸಿದ್ದಾರೆ ಇದು ಮುಂದುವರಿದಲ್ಲಿ ಜಿಲ್ಲೆಗೆ ಮರಣ ಶಾಸನವಾಗುತ್ತದೆ ಹಾಗಾಗಿ ಪ್ರತಿಯೂಬ್ಬ ರೈತರು ಸಹ ಈ ಹೋರಾಟಕ್ಕೆ ಮುಂದಾಗಬೇಕಾಗಿದೆ ಇದಕ್ಕೆ ನಮ್ಮ ರಕ್ತ ಕೊಡುವುದಕ್ಕೂ ನಾವು ಸಿದ್ದವಾಗಿದ್ದೇವೆ ಇವರು ತೆಗೆದುಕೊಂಡು ಹೋಗಲೇ ಬೇಕು ಎಂದಾದರೆ ನಮ್ಮ ಭಾಗದ ಕೆರೆಗಳಿಗೆ ಪೈಪ್ ಲೈನ್ ಮಾಡಿ ನೀರು ಹರಿಸಲಿ ಆಮೇಲೆ ಮುಂದೆ ತೆಗೆದುಕೊಂಡು ಹೋಗಲಿ ಎಂದು ತಿಳಿಸಿದರು.

      ತುರುವೇಕೆರೆ ಕ್ಷೇತ್ರ ಸಿ.ಎಸ್ ಪುರ ಹೋಬಳಿಗೆ ನಾನು ಆಯ್ಕೆಯಾದ ಮೇಲೆ 26 ಕೋಟಿ ಅನುದಾನ ತಂದಿದ್ದು ಈ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಲಾಗುತ್ತಿದೆ ಸರಧಿ ಸಾಲಿನಲ್ಲಿ ಚುನಾವಣೆ ಬಂದ ಹಿನ್ನಲೆಯಲ್ಲಿ ನೀತಿ ಸಂಹಿತೆ ಇದ್ದ ಕಾರಣ ಅಭಿವೃಧ್ದಿ ಯೋಜನೆಗಳಿಗೆ ಚಾಲನೆ ನೀಡಲು ಸಾಧ್ಯವಾಗಿರಲಿಲ್ಲ ಮುಂದಿನ ದಿನದಲ್ಲಿ ಈ ಹೋಬಳಿಯ ಎಲ್ಲಾ ರಸ್ತೆ ಕಾಮಗಾರಿಗಳು ಹಾಗೂ ಅಗತ್ಯವಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

      ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸದಸ್ಯ ಭಾನುಪ್ರಕಾಶ್, ಸಿದ್ದರಾಮಣ್ಣ, ಕೊಂಡಜ್ಜಿವಿಶ್ವನಾಥ್, ಗ್ರಾ.ಪಂ ಅಧ್ಯಕ್ಷೆ ಗೀತಾ, ಲಕ್ಷ್ಮಮ್ಮ, ಇಡಗೂರು ರವಿ, ಮುಖಂಡರಾದ ನಾಗರಾಜು, ಪಾಪು, ಯಧುಕುಮಾರ್, ಚನ್ನಿಂಗಪ್ಪ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link