ಬೆಂಕಿ ವಿನಾಶಕಾರಿ, ನೀರು ಜೀವ ಸಂರಕ್ಷ : ರಂಗಕರ್ಮಿ ಬಸವಲಿಂಗಯ್ಯ

ತುಮಕೂರು:

    ಭಾರತದಲ್ಲಿ ಎರಡು ವಿಚಾರಧಾರೆಗಳು ಪ್ರವಹಿಸುತ್ತಿವೆ. ಅವುಗಳಲ್ಲಿ ಬೆಂಕಿ ಹೊರಗಿನಿಂದ ಬಂದಿದ್ದರೆ, ನೀರು ಇಲ್ಲಿಯೇ ಇದ್ದುದು. ಬೆಂಕಿ ವಿನಾಶ ಮಾಡಿದರೆ ನೀರು ಸರ್ವಜೀವ ಸಂರಕ್ಷಕವಾಗಿದೆ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ತಿಳಿಸಿದರು.

    ತುಮಕೂರು ನಗರದ ಬಾಲ ಭವನದಲ್ಲಿ ದವನ ಭೂಮಿಕೆ ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕುರಂಗರಾಜ ನಾಟಕ ಕೃತಿ ಬಿಡುಗಡೆ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೀರು ಪವಿತ್ರವೂ, ಜೀವರಕ್ಷಕವೂ ಆಗಿದೆ. ಹಾಗಾಗಿಯೇ ಅದು ಜಲಸಂಸ್ಕøತಿ ಆಗಿದೆ. ಕಾಡನ್ನು ಜೀವಸಂಕುಲವನ್ನು ನಾಶಮಾಡುವ ಬೆಂಕಿ ಅಗ್ನಿ ಸಂಸ್ಕೃತಿಯಾಗಿದೆ ಎಂದರು.

     ಬೆಂಕಿ ಹೊರಗಡೆಯಿಂದ ಬಂದಿದ್ದು, ನೀರು ಇಲ್ಲಿಯದೇ ಆಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಭಾರತದಲ್ಲಿ ಕಾವೇರಿ, ಗಂಗಾ ಸೇರಿದಂತೆ ಎಲ್ಲಾ ಎಲ್ಲಾ ನದಿಗಳು ಮಹಿಳೆಯರ ಹೆಸರೇ ಆಗಿವೆ. ಬ್ರಹ್ಮಪುತ್ರವಲ್ಲ ಅದು ಬ್ರಹ್ಮಪುತ್ರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ ಪುರುಷ ಪ್ರಧಾನ ಸಂಸ್ಕೃತಿ ಮತ್ತು ಅಗ್ನಿಸಂಸ್ಕೃತಿ ಈ ಜಲಸಂಸ್ಕೃತಿಯ ಮೇಲೆ ಅತ್ಯಾಚಾರ ಮಾಡುತ್ತಿದೆ. ದೌರ್ಜನ್ಯ ಎಸಗುತ್ತಿದೆ ಎಂದು ವಿಶ್ಲೇಷಿಸಿದರು.

   ಭರತಭೂಮಿಯಲ್ಲಿ ಇರುವ ಯಜ್ಞಯಾಗಾದಿಗಳ ಸಂಸ್ಕೃತಿ ಬೆಂಕಿಯದ್ದಾಗಿದೆ. ಅದು ಕಾಡು, ಅರಣ್ಯ ಸಂಪತ್ತು ಮತ್ತು ಜೀವ ವೈವಿಧ್ಯವನ್ನು ನಾಶಮಾಡುತ್ತದೆ. ಈ ಕಾರಣಕ್ಕಾಗಿಯೇ ಕಾಡಿನ ಜನರು ಇದಕ್ಕೆ ಅಡ್ಡಿಪಡಿಸಿದರು. ಇಂದು ಕೂಡ ಅಗ್ನಿ ಸಂಸ್ಕೃತಿಯೇ ವಿಜೃಂಭಿಸುತ್ತಿದೆ. ಆದರೆ ಈ ದೇಶದ ಮೂಲವಾದ ಜೀವಜಲ ಸಂಸಪತ್ತು ಸಂಸ್ಕೃತಿಯನ್ನು ರಕ್ಷಿಸಿಕೊಂಡು ಬರುತ್ತಿದೆ ಎಂದು ವಿವರಿಸಿದರು.

    ಅಗ್ನಿ ಸಂಸ್ಕೃತಿ ಜನವಿರೋಧಿಯಾದುದು. ಇಂತಹ ಸಂಸ್ಕೃತಿಯನ್ನು ಮೊದಲು ವಿರೋಧಿಸಿದ್ದು ಗಣಪತಿ. ಯಜ್ಞಯಾಗಗಳನ್ನು ಮಾಡುತ್ತಿದ್ದವರಿಗೆ ಅಡ್ಡಿಪಡಿಸುವ ಮೂಲಕ ಜಲಸಂಸ್ಕೃತಿಗೆ ಮನ್ನಣೆ ನೀಡಿದ. ಬೆಂಕಿ ಕಾಡನ್ನು ಸುಟ್ಟರೆ, ನೀರು ಅದನ್ನು ಆರಿಸುತ್ತದೆ. ಕಾಡನ್ನು ವಿಸ್ತರಿಸುತ್ತದೆ. ನಮ್ಮ ಜನ ಕಾಡನ್ನು ಜೀವಸಂಪತ್ತನ್ನು ರಕ್ಷಿಸಿಕೊಂಡು ಬಂದವರು ಎಂದು ಹೇಳಿದರು.ದೇವಾಲಯಗಳಲ್ಲಿ ತೀರ್ಥ ಮತ್ತು ಆರತಿಯನ್ನು ನೀಡಲಾಗುತ್ತದೆ.

     ಇದು ಸಮನ್ವಯಗೊಳಿಸುವ ಕಾರ್ಯ. ನಮ್ಮದೇಶದಲ್ಲಿ ಹೀಗೆ ಸಮನ್ವಯ ಮಾಡಿದರೆ ಅಗ್ನಿ ವಿನಾಶಕಾರಿಯಾಗಿದೆ. ಅಂದರೆ ಗಂಗೆ ಮತ್ತು ಅಗ್ನಿ ಎರಡೂ ವಿಭಿನ್ನವಾಗಿ ಮುಂದುವರೆಯುತ್ತಲೇ ಇವೆ. ಇಂತಹ ಅಪಾಯಕಾರಿ ಚಿಂತನೆಗೆ ಸಾಂಸ್ಕøತಿಕ ಚಿಂತನೆಗಳೇ ಮದ್ದಾಗಿವೆ. ಮನು ಬರೆದ ಚರಿತ್ರೆ ಮತ್ತು ಪುರಾಣಗಳನ್ನು ವಿಕೃತಗೊಳಿಸುವ ಕೆಲಸ ನಡೆಯುತ್ತಿದೆ. ರಾಜಕಾರಣಿಗಳು ತಮಗೆ ಬೇಕಾದಂತೆ ಸಂವಿಧಾನವನ್ನು ತಿರುಚುವ ಕೆಲಸಕ್ಕೂ ಕೈಹಾಕುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

      ಸಾಹಿತಿ ಕೆ.ಬಿ.ಸಿದ್ದಯ್ಯ ಮಾತನಾಡಿ ಚರಿತ್ರೆಯೊಳಗೆ ಕೆಳಜಾತಿ ರಾಜರು ಕಳೆದುಹೋಗಿದ್ದಾರೆ. ಅವರನ್ನು ಹುಡುಕಿ ಹೊರತೆಗೆಯ ಬೇಕಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಲಕ್ಷ್ಮಣದಾಸ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ನಾಗಭೂಷಣ್ ಬಗ್ಗನಡು, ಪ್ರಜಾಪ್ರಗತಿ ಸಂಪಾದಕ ನಾಗಣ್ಣ,ಸಮಾಜ ಕಲ್ಯಾಣ ಇಲಾಖೆಯ ಡಾ.ಜಿ.ಪಿ.ದೇವರಾಜು, ಕನ್ನಡ ಸಂಸ್ಕೃತಿ ಇಲಾಖೆಯ ಬಸವರಾಜು ಅಪ್ಪಿನಕಟ್ಟೆ, ರಂಗಕರ್ಮಿ ಸಿದ್ದರಾಜು, ಕೃತಿ ಕರ್ತೃ ಡಾ.ಓನಾಗರಾಜು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link