ಹಾವು ಹಿಡಿದು ಕಾಡಿಗೆ ರವಾನೆ

ತುಮಕೂರು:

         ತುಮಕೂರು ತಾಲ್ಲೂಕು ಅಂತರಸನಹಳ್ಳಿ ಹೌಸಿಂಗ್ ಬೋರ್ಡ್‍ನ ಮನೆಯೊಂದರಲ್ಲಿ ನಾಗರ ಹಾವೊಂದು ಕಾಣಿಸಿಕೊಂಡು ಅಲ್ಲಿನ ಮನೆಯವರಿಗೆ ಹಾಗೂ ಸುತ್ತಮುತ್ತಲ ಜನರಿಗೆ ಆತಂಕ ಮೂಡಿಸಿತ್ತು. ಸದರಿ ಹಾವನ್ನು ಹೊರ ಎಂಗ್ಲರ್ ಫೌಂಡೇಷನ್ ಸಂಸ್ಥೆಯ ದಿಲೀಪ್, ಪ್ರೇಮ್, ಮುರಳಿ, ಯೋಗರಾಜ್, ದಾದಾಪೀರ್ ಅವರ ತಂಡ ಹಿಡಿದು ಕಾಡಿಗೆ ರವಾನಿಸಿತು.

         ಹೌಸಿಂಗ್ ಬೋರ್ಡ್‍ನ ನಾಗರಾಜು ಎಂಬುವರ ಮನೆಯಲ್ಲಿ 6.5 ಅಡಿ ಉದ್ದದ ನಾಗರ ಹಾವು ಪ್ರತ್ಯಕ್ಷವಾಗಿತ್ತು. ಈ ಬಗ್ಗೆ ದಿಲೀಪ್‍ಗೆ ಮಾಹಿತಿ ನೀಡಲಾಗಿ ಹಾವನ್ನು ಹಿಡಿದು ಚಿನಗದ ಬೆಟ್ಟಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ. ಇಂತಹ ಹಾವು ಅಥವಾ ಕಾಡು ಪ್ರಾಣಿಗಳು ಕಂಡುಬಂದಲ್ಲಿ ಕರೆ ಮಾಡಿ ತಿಳಿಸಬಹುದಾಗಿದೆ ಎಂದು ದಿಲೀಪ್ ತಿಳಿಸಿದ್ದಾರೆ. ಮೊ. ಸಂ.9916790692, 8317398381 ಇವರನ್ನು ಸಂಪರ್ಕಿಸಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link