ಬೆಂಗಳೂರು:
ಈಗ ನಡೆಯುತ್ತಿರುವ ಐಪಿಎಲ್ ಮ್ಯಾಚ್ ಬಗ್ಗೆ ಜನರು ಹುಚ್ಚೆದ್ದು ತಮ್ಮ ತಮ್ಮ ಟೀಂಗೆ ಸಪೋರ್ಟ್ ಮಾಡ್ತಿದ್ದಾರೆ. ಇದನ್ನೇ ಉಪಯೋಗಿಸಿಕೊಂಡ ನಗರದ ರೌಡಿಗಳು ಐಪಿಎಲ್ನಲ್ಲಿ ಹಣ ಲಪಾಟಾಯಿಸುತ್ತಿದ್ದಾರೆ.ಹೌದು..,ಇತ್ತೀಚೆಗಷ್ಟೇ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ರೌಡಿಗಳು ತೊಡಗಿದ್ದಾರೆ ಎನ್ನುವ ವಿಚಾರ ತಿಳಿದ ಸಿಸಿಬಿ,ದರೋಡೆಕೋರ ಕುಣಿಗಲ್ ಗಿರಿಯ ಕಾರಿನಲ್ಲಿ ಎರಡು ಲಕ್ಷ ನಗದು ಹಣವನ್ನ ರೆಡ್ ಹ್ಯಾಂಡಾಗಿ ಸೀಜ್ ಮಾಡಿ ಆತನನ್ನು ವಿಚಾರಣೆ ನಡೆಸಿದ್ದರು. ಕುಣಿಗಲ್ ಗಿರಿ, ಸಿಸಿಬಿ ವಿಚಾರಣೆ ವೇಳೆ ಬೆಟ್ಟಿಂಗ್ನಲ್ಲಿ ಹಲವಾರು ಮಂದಿ ಭಾಗಿಯಾಗಿದ್ದಾರೆ.
ಅದರಲ್ಲೂ ಹನುಮಂತ, ಮಂಜ ಹೀಗೆ ಇನ್ನಿತರೆ ರೌಡಿಗಳು ಸಾಥ್ ನೀಡಿ,ಆಪ್ಗಳ ಮೂಲಕ ಬೆಟ್ಟಿಂಗ್ ದಂಧೆಯಲ್ಲಿ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿರುವ ವಿಚಾರವನ್ನು ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.
ಹೀಗಾಗಿ ಬೆಟ್ಟಿಂಗ್ ದಂಧೆಯನ್ನು ಬ್ರೇಕ್ ಮಾಡಲು ಸಿಸಿಬಿ ಮುಂದಾಗಿದ್ದು, ರೌಡಿಗಳ ಚಲವಲನವನ್ನು ಗಮನಿಸುತ್ತಾ, ಯಾವ ಯಾವ ರೌಡಿಗಳು ಬೆಟ್ಟಿಂಗ್ನಲ್ಲಿ ತೊಡಗಿದ್ದಾರೆ ಎನ್ನುವುದರ ಕುರಿತು ಸಿಸಿಬಿ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆ ಚಿನ್ನಸ್ವಾಮಿಯಲ್ಲಿ ನಡೆಯುವ ಐಪಿಎಲ್ ಮ್ಯಾಚ್ ಸಂದರ್ಭ ಮಫ್ತಿಯಲ್ಲಿ ಓಡಾಡಿ ಕೆಲ ಬುಕ್ಕಿಗಳನ್ನ ವಶಕ್ಕೆ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
