ಕುಣಿಗಲ್
ಕಣ್ಣಿಗೆ ಖಾರದ ಪುಡಿ ಎರಚಿ ಹಿಗ್ಗಾಮುಗ್ಗ ತಳಿಸಿ ಚಾಕುವಿನಿಂದ ಇರಿದು ಸುಮಾರು ಐದು ಲಕ್ಷ ಕೈಚೀಲವನ್ನು ಸುಮಾರು ಎಂಟು ಜನರಿರುವ ಗುಂಪೊದು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕುಣಿಗಲ್ ಪೆಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಸುಮಾರು ಆರು ಗಂಟೆಯಲ್ಲಿ ಜರುಗಿದೆ.
ತುಮಕೂರು ನಗರದ ಮಂಡಿಪೇಟೆಯಲ್ಲಿರುವ ಆಯಿಲ್ ಮಿಲ್ನಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಕಾಶ್ ಅವರು ಪ್ರತಿ ಬುಧವಾರ ಕೆಲವು ಅಂಗಡಿಗಳಲ್ಲಿ ಬಟವಾಡೆ ವಸೂಲಿಗೆಂದು ಬಂದು ಹಣವನ್ನು ವಸೂಲಿ ಮಾಡಿಕೊಂಡು ಮತ್ತೆ ವಾಪಸ್ ತುಮಕೂರಿಗೆ ಸಂಜೆ ಸುಮಾರು ಆರು ಗಂಟೆ ವೇಳೆಯಲ್ಲಿ ಖಾಸಗಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಎಂಟು ಜನರಿದ್ದ ಗುಂಪೆದು ಬೈಕ್ನಲ್ಲಿ ಕುಣಿಗಲ್ನಿಂದ ಬಸ್ಸನ್ನು ಹಿಂಬಾಲಿಸಿಕೊಂಡು ಬಂದು ಕೊತ್ತಗೆರೆ ಬಸ್ ಸ್ಟಾಪ್ನಲ್ಲಿ ಪ್ರಕಾಶ್ ಅವರನ್ನು ಬಲವಂತವಾಗಿ ಬಸ್ನಿಂದ ಎಳೆದುಕೊಂಡು ಬೈಕ್ನಲ್ಲಿ ಕೂರಿಸಿಕೊಂಡು ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಪಕ್ಕದಲ್ಲಿದ್ದ ಫ್ಲೈಓವರ್ ಕೆಳ ಭಾಗಕ್ಕೆ ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿ ಬಲಗೈಗೆ ಚಾಕುವಿನಿಂದ ಇರಿದು ಪ್ರಕಾಶ್ ಅವರ ಬಳಿ ಇದ್ದಂತಹ ಸುಮಾರು ಐದು ಲಕ್ಷ ರೂಗಳ ಹಣದ ಚೀಲದೊಂದಿಗೆ ಪರಾರಿಯಾಗುತ್ತಾರೆ. ವಿಷಯ ತಿಳಿದ ಸ್ಥಳೀಕರು ಪೆಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ತಕ್ಷಣ ಕುಣಿಗಲ್ ಪೆಲೀಸ್ ಠಾಣೆಯ ಪಿಎಸ್ಐ ಪುಟ್ಟೇಗೌಡ ಸ್ಥಳಕ್ಕೆ ತೆರಳಿ ಪ್ರಕಾಶ್ ಅವರನ್ನು ಕರೆತಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಕೂಲಂಕಷವಾಗಿ ವಿಚಾರಣೆ ಮಾಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ