ಪಕ್ಷದ ಮುಖಂಡರ ಬಗ್ಗೆ ಮಾತನಾಡುವ ನೈತಿಕತೆ ಮುನಿರತ್ನಗಿಲ್ಲ : ಧ್ರುವ ನಾರಾಯಣ

ಬೆಂಗಳೂರು

    ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುವ ನೈತಿಕತೆ ಮುನಿರತ್ನಗಿಲ್ಲ ಎಂದು ಮಾಜಿ ಸಂಸದ ಧ್ರುವನಾರಾಯಣ ಹೇಳಿದ್ದಾರೆ.

    ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಹಾಗೂ ತಾವು ಮತದಾರರ ಮಾಹಿತಿ ಪಡೆಯುತ್ತಿರುವುದಾಗಿ ಮುನಿರತ್ನ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿದರು.ಆರ್.ಆರ್.ನಗರವನ್ನು ಬಳ್ಳಾರಿ ಮಾಡಲು ಬಿಡುವುದಿಲ್ಲ ಎಂದು ಮಾಜಿ ಶಾಸಕ ಮುನಿರತ್ನ ಹೇಳುವ ಮೂಲಕ ಬಳ್ಳಾರಿ ಜನರಿಗೆ ಅವಮಾನ ಮಾಡಿದ್ದಾರೆ. ಬಳ್ಳಾರಿಗೆ ಕೆಟ್ಟ ಹೆಸರು ತಂದುಕೊಟ್ಟಿದ್ದು ಇದೇ ಬಿಜೆಪಿಯ ಜನಾರ್ದನ ರೆಡ್ಡಿ ಎಂದು ತಿರುಗೇಟು ನೀಡಿದರು.

    ಲಕ್ಷ್ಮೀದೇವಿನಗರದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾಗ ಮುನಿರತ್ನ ಬೆಂಬಲಿಗ ಕಾರ್ಪೋರೇಟರ್ ವೇಲು ನಾಯಕ್ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಕ್ಷೇತ್ರಕ್ಕೆ ಮಿಲಿಟರಿ ಬೇಕು ಎಂದಿದ್ದಾರೆ. ಮೊದಲ ಆ ಕೆಲಸವಾಗಲಿ.ನೀವು ಹಿಂದಿನಿಂದ ಹೇಗೆ ಬಳಸಿಕೊಂಡಿದ್ದೀರಿ ಎನ್ನುವುದು ಜನತೆಗೆ ಗೊತ್ತಿದೆ. ಕ್ಷೇತ್ರದಲ್ಲಿ ಜನ ಭಯಭೀತಿಯಲ್ಲಿದ್ದಾರೆ ಎಂದರು.

    ಬಳ್ಳಾರಿ ಆಗಲಿಕ್ಕೆ ಬಿಡುವುದಿಲ್ಲ ಎಂದು ಮುನಿರತ್ನ ಹೇಳಿಕೆಗೆ ಅವರು ಬಳ್ಳಾರಿ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಬಳ್ಳಾರಿ ಮಾಡಲ್ ದೇಶಕ್ಕೆ ಪರಿಚಯಿಸಿದವರು ಬಿಜೆಪಿಯವರೇ ಆಗಿದ್ದಾರೆ. ಮಿಲಿಟರಿ ಕರೆಸಬೇಕು ಎಂದು ಮುನಿರತ್ನ ಹೇಳಿದ್ದಾರೆ. ಈಗಾಗಲೇ ಅರೆ ಮಿಲಟರಿ ಕರೆಸುವಂತೆ ನಮ್ಮ ಸಂಸದ ಡಿ. ಕೆ. ಸುರೇಶ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದರು.

   ಬೇರೆಯವರು ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಮುನಿರತ್ನ ಹೇಳುವುದು ಸರಿಯಲ್ಲ. ಹಾಗಾದರೆ ಶಿರಾದಲ್ಲಿ ವಿಜಯೇಂದ್ರ ಏನು ಮಾಡುತ್ತಿದ್ದಾರೆ. ಬಿಜೆಪಿ ಉಸ್ತುವಾರಿಗಳು ಎಲ್ಲಿಯವರು ? ಎಂದು ಪ್ರಶ್ನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link