ಗಣೇಶ್ ಹುಡುಕಾಟ : ಬರಿಗೈಯಲ್ಲಿ ಹಿಂದಿರುಗಿದ ಪೊಲೀಸ್ ತಂಡಗಳು

ಬೆಂಗಳೂರು

       ಶಾಸಕ ಆನಂದ್ ಸಿಂಗ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಕಂಪ್ಲಿ ಶಾಸಕ ಗಣೇಶ್ ಬಂಧನಕ್ಕೆ ಮುಂಬೈ, ಪುಣೆ, ಗೋವಾಕ್ಕೆ ತೆರಳಿದ್ದ ಪೊಲೀಸ್ ತಂಡಗಳು ಬರಿಗೈಯಲ್ಲಿ ಹಿಂದಿರುಗಿವೆ.

        ಹಲ್ಲೆ ಸಂಬಂಧ ಆನಂದ್‍ಸಿಂಗ್ ಹೇಳಿಕೆ ಪಡೆದುಕೊಕೊಂಡಿದ್ದ ರಾಮನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿ ಆರೋಪಿ ಶಾಸಕ ಗಣೇಶ್ ಶೋಧಕ್ಕಾಗಿ 4 ತಂಡಗಳನ್ನು ರಚಿಸಿ ಮುಂಬೈ, ಪುಣೆ, ಗೋವಾ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಕಳುಹಿಸಲಾಗಿತ್ತು ಪೆÇಲೀಸರು ಶೋಧ ನಡೆಸುತ್ತಿರುವುದು ಗೊತ್ತಾಗಿ ಶಾಸಕ ಗಣೇಶ್ ನಿರಂತರ ಜಾಗ ಬದಲಿಸುತ್ತಿರುವುದರಿಂದ ಪೊಲೀಸರು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.

        ಈ ನಡುವೆ ಹಲ್ಲೆಗೊಳಗಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್ ಗುಣಮುಖರಾಗುತ್ತಿದ್ದು ಕಣ್ಣಿನ ಭಾಗದ ಊತ ಕಡಿಮೆಯಾಗಿದೆ ತಮ್ಮ ಮೇಲೆ ಹಲ್ಲೆ ನಡೆಸಿರುವ ಗಣೇಶ್ ಬಂಧನದವರೆಗೆ ಶಾಸಕ ಆನಂದ್ ಸಿಂಗ್ ಆಸ್ಪತ್ರೆಯಿಂದ ಬಿಡುಗಡೆಯಾಗದಿರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

        ಆನಂದ್‍ಸಿಂಗ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಎನ್ ಗಣೇಶ್ ಮೊದಲ ಆರೋಪಿಯಾಗಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 323, 324, 307, 504 ಹಾಗೂ 506ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ಕೊಲೆಯತ್ನ ಎಂದು ಉಲ್ಲೇಖಿಸಲಾಗಿದೆ.

       ಪೊಲೀಸರು ಇತ್ತ ಶಾಸಕ ಗಣೇಶ್ ಪತ್ತೆಗೆ ಮುಂದಾಗಿರುವ ಹಿನ್ನೆಲೆ ಬಂಧನದ ಭೀತಿ ಎದುರಿಸುತ್ತಿರುವ ಗಣೇಶ್, ರಾಮನಗರ ಜಿಲ್ಲಾ ನ್ಯಾಯಾಲದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ.ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಗಣೇಶ್ ಅವರನ್ನು ಕಾಂಗ್ರೆಸ್ ಪಕ್ಷ ಅಮಾನತ್ತು ಮಾಡಲಾಗಿದ್ದು, ತನಿಖೆಗಾಗಿ ಕೆಪಿಸಿಸಿಯಿಂದ ವಿಚಾರಣಾ ಸಮಿತಿ ಕೂಡ ರಚಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap