ಸಿದ್ಧಗಂಗಾ ಮಠಕ್ಕೆ ಡಾ.ನಿರ್ಮಲಾನಂದನಾಥರು ಭೇಟಿ

ತುಮಕೂರು:

       ಆದಿಚುಂಚನಗಿರಿ ಮಠದ ಡಾ.ನಿರ್ಮಾಲಾನಂದನಾಥ ಸ್ವಾಮೀಜಿ ಸಿದ್ದಗಂಗಾ ಮಠಕ್ಕೆ ಭೇಟಿ ಡಾ.ಶಿವಕುಮಾರಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದರು.

        ಶ್ರೀಗಳಿರುವ ಹಳೇ ಮಠಕ್ಕೆ ತೆರಳಿದ ನಿರ್ಮಾಲಾನಂದನಾಥರು, ಸುಮಾರು 15 ನಿಮಿಷಗಳ ಕಾಲ ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಈ ಹಿಂದೆ ಆಸ್ಪತ್ರೆಯಲ್ಲಿದ್ದಾಗ ಶ್ರೀಗಳನ್ನು ನೋಡಿದ್ದೆವು, ಇದೀಗ ಮತ್ತೇ ನೋಡಲು ಬಂದಿದ್ದೇವೆ. ಪೂಜ್ಯರು ತುಂಬಾ ಗೆಲುವಾಗಿದ್ದಾರೆ. ಎಲ್ಲಾ ಪ್ಯಾರಾಮೀಟರ್ಸ್ ನಾರ್ಮಲ್ ಆಗಿದೆ. ಬಿಪಿ, ಪಲ್ಸ್ ರೇಟ್, ಆಕ್ಸಿಜನ್ ಸ್ಯಾಚುರೇಷನ್ ಎಲ್ಲಾವೂ ನಾರ್ಮಲ್ ಆಗಿದೆ.

      ಯಾವಾಗ ಬಂದಿರಿ, ಚೆನ್ನಾಗಿದ್ದೀರಾ. ಪ್ರಸಾದ ಮಾಡಿಕೊಂಡು ಹೋಗಿ .ಇನ್ನೂ ಸ್ವಲ್ಪಹೊತ್ತು ಇದ್ದು ಹೋಗಿ ಅಂತ ಮಾತನಾಡಿಸಿದ್ರು.. ನಾವು ಕೂಡ ತಾವು ಹೇಗೀದ್ದೀರಿ ಅಂತ ಕೇಳಿದ್ವಿ ‘ನಾನ್ ಚನ್ನಾಗಿದ್ದೀನಿ’ ಎಂದು ಹೇಳಿದ್ರು. ಸದ್ಯ ಶ್ರೀಗಳು ಗೆಲುವಾಗಿದ್ದಾರೆ, ಸುಸ್ತು ಇರೋದ್ರಿಂದ ಸ್ವಲ್ಪ ವಿಶ್ರಾಂತಿ ಮಾಡ್ತಿದ್ದಾರೆ ಎಂದು ನಿರ್ಮಾಲಾನಂದನಾಥ ಶ್ರೀಗಳು ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link