ಹುಳಿಯಾರು:
ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿಪಾಳ್ಯದ ಗ್ರಾಮದ ಬಳಿಯ ಸೋಮಯ್ಯನಕಟ್ಟೆಯಲ್ಲಿ ಅಕ್ರಮವಾಗಿ ಮರಳು ಮತ್ತು ಮಣ್ಣನ್ನು ಸಾಗಣಿಕೆ ಮಾಡುತ್ತಿದ್ದಾರೆ ಎಂದು ಮರಾಠಿಪಾಳ್ಯದ ಸಿದ್ಧರಾಮಯ್ಯ ಆರೋಪಿಸಿದ್ದಾರೆ. ಗ್ರಾಮದ ಸಮೀಪವೇ ಕಟ್ಟೆಯಲ್ಲಿ ಮರಳು ಮತ್ತು ಮಣ್ಣಿನ ಅಕ್ರಮ ದಂಧೆ ನಡೆಯುತ್ತಿದೆ. ಅಕ್ರಮವಾಗಿ ಮಣ್ಣನ್ನು ಹೊಡೆಯುತ್ತಿರುವ ಪರಿಣಾಮ ಕಟ್ಟೆಯಲ್ಲಿ ಆಳುದ್ದದ ಗುಂಡಿಗಳು ಸೃಷ್ಟಿಯಾಗಿವೆ. ಇದರಿಂದ ಅಂತರ್ಜಲ ಮಟ್ಟ ಕುಸಿದು ತೆಂಗಿನ ತೋಟಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರಿದ್ದಾರೆ.
ಹಗಲು ವೇಳೆ ಮಣ್ಣು ಮತ್ತು ರಾತ್ರಿ ವೇಳೆ ಮರಳನ್ನು ಹೊಡೆಯಲಾಗುತ್ತದೆ. ಅಲ್ಲದೆ ಮರಳನ್ನು ತಮ್ಮತಮ್ಮ ಜಮೀನು, ತೋಟಗಳಲ್ಲಿ ಸಂಗ್ರಹಿಸಿಟ್ಟು ನಂತರ ಮಾರಾಟ ಮಾಡುತ್ತಿದ್ದಾರೆ. ಇವುಗಳ ಚಿತ್ರ ಸಹಿತ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದೆರಡು ದಿಗಳಿಂದ ವೈರಲ್ ಆಗುತ್ತಿದೆ.
ಅಲ್ಲದೆ ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಮೌನ ವಹಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಕೂಡಿಸಿಟ್ಟಿರುವ ಮರಳು ಜಪ್ತಿ ಮಾಡಿ ಕಟ್ಟೆಯಲ್ಲಿ ಮರಳು ತುಂಬುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
