ಬೆಂಗಳೂರು
ಮಾರುವೇಷದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಯುವತಿಯರನ್ನು ಚುಡಾಯಿಸುವುದು,ದಾರಿ ಹೋಕರಿಗೆ ಕಿರಿಕಿರಿ ಉಂಟು ಮಾಡುವುದು, ಕುಡಿದು ಜಂಕ್ಷನ್ಗಳು ರಸ್ತೆ ಕಾರ್ನರ್ಗಳಲ್ಲಿ ಗುಂಪಾಗಿ ಸೇರಿ ಜಗಳ ಮಾಡುತ್ತಿದ್ದ 260 ಮಂದಿಯನ್ನು ಉತ್ತರ ವಿಭಾಗದ ಪೊಲೀಸರು ವಶಕ್ಕೆ ತೆಗೆದು ವಿಚಾರಣೆ ಕೈಗೊಂಡಿದ್ದಾರೆ.
ಹೆಬ್ಬಾಳ ಸುತ್ತಮುತ್ತಲ ಪ್ರದೇಶಗಳಲ್ಲಿ ಜಂಕ್ಷನ್ಗಳು,ಆಟೋ,ಬಸ್ ನಿಲ್ದಾಣಗಳು, ರಸ್ತೆ ಕಾರ್ನರ್ಗಳಲ್ಲಿ ಗುಂಪಾಗಿ ಸೇರುವುದು ಮಧ್ಯರಾತ್ರಿವರೆಗೆ ಸ್ಥಳೀಯರಿಗೆ ದಾರಿ ಹೋಕರಿಗೆ ಕಿರಿಕಿರಿ ಉಂಟುಮಾಡುತ್ತಿರುವ ಬಗ್ಗೆ ಬಂದ ದೂರುಗಳ ಹಿನ್ನೆಲೆಯಲ್ಲಿ ಡಿಸಿಪಿ ಶಶಿಕುಮಾರ್ ಅವರು ಎಸಿಪಿ ಇನ್ಸ್ಪೆಕ್ಟರ್ಗಳು ಸೇರಿ 40ಕ್ಕೂ ಹೆಚ್ಚು ಮಂದಿ ಸಿಬ್ಬಂದಿಯೊಂದಿಗೆ ಮಾರುವೇಷದ ಕಾರ್ಯಾಚರಣೆ ಕೈಗೊಂಡರು.
ಹೆಬ್ಬಾಳದ ಆಟೋ ನಿಲ್ದಾಣವೊಂದರಿಂದ ಶುಕ್ರವಾರ ರಾತ್ರಿ9 ರಿಂದ ಆರಂಭಗೊಂಡ ವಿಶೇಷ ಕಾರ್ಯಾಚರಣೆಯು ಮಧ್ಯರಾತ್ರಿ 2 ರವರೆಗೆ ಬೈಕ್ ಜೀಪುಗಳಲ್ಲಿ ಮಾರು ವೇಷದಲ್ಲಿ ಗಲ್ಲಿಗಳು,ಜಂಕ್ಷನ್ಗಳು,ಆಟೋ,ಬಸ್ ನಿಲ್ದಾಣಗಳು, ರಸ್ತೆ ಕಾರ್ನರ್ಗಳಲ್ಲಿ ಸಂಚರಿಸಿ ಕಿರಿಕಿರಿ ಉಂಟು ಮಾಡುವ ದೌರ್ಜನ್ಯ ನಡೆಸುವ ಬೆದರಿಕೆ ಹಾಕುವವರು ಒಳಗೊಂಡ 7 ಮಂದಿ ಮಂಗಳಮುಖಿಯರು ಸೇರಿ 260 ಮಂದಿಯನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.
ವಿಚಾರಣೆಯಲ್ಲಿ ಯುವಕರ ವಿಳಾಸ, ಮೊಬೈಲ್ ಸಂಖ್ಯೆ ಮಾಡುತ್ತಿರುವ ಉದ್ಯೋಗದ ಮಾಹಿತಿ ಪಡೆದುಕೊಂಡು ಪೋಷಕರನ್ನು ಕರೆಯಿಸಿ ಅವರ ಮುಂದೆಯೇ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.ವಶಕ್ಕೆ ಪಡೆದುಕೊಂಡವರಲ್ಲಿ ಅಪರಾಧ ಕೃತ್ಯದಲ್ಲಿ ತೂಡಗಿರುವವರು ಪತ್ತೆಯಾಗಿದ್ದು ಅವರಿಗೆ ಕಠಿಣ ರೀತಿಯಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
