ವಿದೇಶಿ ಪ್ರವಾಸಕ್ಕೆ ಹೋದ ಉದ್ಯಮಿ ಮನೆಗೆ ಕನ್ನಾ ಹಾಕಿದ ಕಳ್ಳರು

ಬೆಂಗಳೂರು

       ಕುಟುಂಬದವರ ಜೊತೆ ವಿದೇಶ ಪ್ರವಾಸಕ್ಕೆ ಹೋಗಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು 10 ಲಕ್ಷ ನಗದು ಸೇರಿ 50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿರುವ ದುರ್ಘಟನೆ ಜೆ.ಸಿನಗರ ಪೊಲೀಸ್ ಠಾಣಾ ವ್ಯಾಫ್ತಿಯಲ್ಲಿ ನಡೆದಿದೆ.

       ಜೆ.ಸಿನಗರದ ಜಯಮಹಲ್‍ನ ಮಿಟ್ಟಲ್ ಲಕ್ಷುರಿ ಅಪಾರ್ಟ್‍ಮೆಂಟ್‍ನ ಫ್ಲಾಟ್‍ವೊಂದರಲ್ಲಿ ವಾಸಿಸುತ್ತಿದ್ದ ಉದ್ಯಮಿ ಸಚಿತ್ ಭರತ್ ಅವರು ಕುಟುಂಬದವರೊಂದಿಗೆ ಕಳೆದ ಏ.8ರಂದು ವಿದೇಶ ಪ್ರವಾಸಕ್ಕೆ ತೆರಳಿದ್ದರು.

        ಮನೆಯ ಬಾಗಿಲಿಗೆ ಬೀಗ ಹಾಕಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಸಂಚು ರೂಪಿಸಿ ಮುಂಭಾಗಿಲು ಮುರಿದು ಒಳನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಬೀರುವಿನಲ್ಲಿದ್ದ 10 ಲಕ್ಷ ನಗದು,ವಜ್ರದ 5 ಕೈ ಗಡಿಯಾರಗಳು, 5 ವಜ್ರದ ಉಂಗುರಗಳು, ಚಿನ್ನದ ಬ್ರೇಸ್ಲೆಟ್‍ಗಳು, 3 ಜತೆ ಓಲೆಗಳು, 25 ಗ್ರಾಂ. 5 ಚಿನ್ನದ ನಾಣ್ಯಗಳು, ಬೆಳ್ಳಿ 50 ಗ್ರಾಂ ಹತ್ತು ನಾಣ್ಯಗಳು, ಸೇರಿದಂತೆ ಒಟ್ಟು 50 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

        ಪ್ರವಾಸ ಮುಗಿಸಿ ಉದ್ಯಮಿ ಸಚಿತ್ ಭರತ್ ಅವರು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಕಂಡುಬಂದಿದೆ.ಕೂಡಲೇ ಕಳ್ಳತನದ ಸಂಬಂಧ ಜೆ.ಸಿ.ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಸಿಸಿಟಿವಿ ಕ್ಯಾಮಾರ ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link