ಜನರ ಮನ ಸೆಳೆದ ವಚನಗಾಯನ

ಕೊಟ್ಟೂರು 

         ಪಟ್ಟಣದ ಸಮೀಪದ ಅಲಬೂರುನಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮದಲ್ಲಿ ವಚನಗಾಯನ ಕಾರ್ಯಕ್ರಮ ಜನಮನ ಸೆಳೆಯಿತು.

          ಶ್ರೀ ಬನ್ನಿ ಮಹಾಂಕಾಳಿ ದೇವಿ ದೇವಸ್ಥಾನದ ಮುಂಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂಘ ಇವರು ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್. ಪ್ರಕಾಶ್ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷರು, ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಗೀತಕ್ಕೆ ಜಾತಿ ಬೇದವಿಲ್ಲ. ವರ್ಗ ಬೇದವಿಲ್ಲ, ಭಾಷೆ ಬೇದವಿಲ್ಲ ಅದ್ದರಿಂದ ಸಂಗೀತದಲ್ಲಿ ತೊಡಗಿಸಿ ಕೊಡವರ ಮುಖ ಯಾವಾಗಲು ಸಂತಸದಿಂದ ಕೂಡಿರುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವುಗಳು ಕೂಡ ಇದರಲ್ಲಿಯ ಆನಂದವನ್ನು ಅನುಭವಿಸಬೇಕು, ವಚನ ಸಾಹಿತ್ಯವನ್ನು ಸಂಗೀತದೊಂದಿಗೆ ಕೇಳಿದರೆ ದೊಡ್ಡ ಕಾಯಿಲೆಗಳು ಕೂಡ ವಾಸಿಯಾಗುತ್ತವೆ. ಸ್ಥಳೀಯ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕತ ಇಲಾಖೆಯವರು ಪ್ರಾಯೋಜಿತ ಕಾರ್ಯಕ್ರಮ ನೀಡಿ ಕಲಾವಿದರಿಗೆ ಉತ್ತಮ ಪ್ರೋತ್ಸಾಹ ಕೊಡುವುದು ಶ್ಲಾಘನೀಯ ಎಂದು ಹೇಳಿದರು.

          ಶ್ರೀಮತಿ ಕೊಚಾಲಿ ಸುಶೀಲಮ್ಮ ತಾ.ಪಂ ಉಪಾಧ್ಯಕ್ಷರು ಹ.ಬೋ.ಹಳ್ಳಿ ಇವರು ಮಾತನಾಡಿ ನಾಡು ನುಡಿ ಸಂಸ್ಕತಿ ಪರಂಪರೆಗಳನ್ನು ಎತ್ತಿಹಿಡಿಯುವ ನಿಟ್ಟಿನಿಲ್ಲಿ ಸಾಂಸ್ಕತಿಕ ರಂಗ ಕೆಲಸ ಮಾಡಬೇಕಿದೆ ಎಂದರು.

         ಹೆಚ್. ಪರುಶುರಾಮಪ್ಪ ವೈದ್ಯರು ಮಾತನಾಡಿ ಸಂಘ ಸಂಸ್ಥೆಗಳನ್ನು ಸರ್ಕಾರವು ಪ್ರೋತ್ಸಾಹಿಸಿ ಸಹಾಯ ನೀಡಿ ನಿರಂತರವಾಗಿ ಸಾಂಸ್ಕತಿಕ ಕಾರ್ಯಕ್ರಮ ನಡೆಯಲು ಅನುವುಮಾಡಿಕೊಡಬೇಕು ಎಂದರು.

          ಶ್ರೀಮತಿ ವಸಂತ ಕೊಟ್ರೇಶ್ ಗ್ರಾ.ಪಂ ಅದ್ಯಕ್ಷರು ಅಲಬೂರು, ಇವರು ಮಾತನಾಡಿ ಇಂತಹ ಅವಕಾಶಗಳನ್ನು ಗ್ರಾಮೀಣ ಭಾಗದ ಪ್ರತಿಭಾವಂತರು ಬಳಸಿಕೊಂಡು ನಾಡಿನ ಸಾಂಸ್ಕøತಿಕ ಶ್ರೀಮಂತಿಕೆಯನ್ನು ಉಳಿಸಿ ಬೆಳಸಬೇಕಿದೆ ಎಂದರು.

          ಕಲಾವಿದರಾದ ಕೋಗಳಿ ಕಮ್ಮಾರ ಕೋಟೆಪ್ಪ ಕೇರವ್ ತಾಳ ಪಟದೀಪ್ ರಾಗ್ “ನಿತ್ಯ ಮನವ ಸೋದಿಸಬೇಕು”- ಬಸವಣ್ಣನವರ ವಚನ, ಸೋಹನಿರಾಗ್ ತೀನತಾಳ್‍ದಲ್ಲಿ “ಯಾರು ಕಟ್ಟಿದ ಕೆರೆಯ ನೀರನ್ನು ತಂದು, ಪೂಜಿಸುವರಯ್ಯ” -ಅಂಬಿಗರ ಚೌಡಯ್ಯ ನವರ ವಚನಗಳನ್ನು ಹಾಡಿ ಜನರ ಮೆಚ್ಚುಗೆಯನ್ನು ಪಡೆದರು.

           ಕಾರ್ಯಕ್ರಮದಲ್ಲಿ ಹೆಚ್. ಎಂ.ಶಕ್ರಯ್ಯ, ಎನ್.ಹೆಚ್. ಎಂ. ಶಂಭುಲಿಂಗಯ್ಯ, ಟಿ. ಕೊಟ್ರಪ್ಪ, ಹೆಚ್. ಹನುಮರೆಡ್ಡಿ, ಎ.ಬಿ. ರಾಮಪ್ಪ, ಹೆಚ್. ಎಂ. ಮಂಜುನಾಥ,ಅಂಕ್ಲಿರಾಮಪ್ಪ, ಹೂಗಾರ ಸಿದ್ದಪ್ಪ, ಉತ್ತಂಗಿ ಮಲ್ಲಣ್ಣ, ಹೆಚ್.ನೀಲಪ್ಪ, ಹೆಚ್. ನಿಂಗಪ್ಪ, ಇವರುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಗುರು ಬಸವೇಶ್ವರ ಜಾನಪದ ಕಲಾ ಸಂಘದ ಕಲಾವಿದರ ಬಳಗದಿಂದ ಉತ್ತಮವಾದ ಹಾಡುಗಾರಿಕೆ ಜನಮನಸೂರೆಗೊಂಡಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link